Thursday, June 26, 2025
spot_imgspot_img
spot_imgspot_img

ವಿಟ್ಲ: ಅಕ್ರಮ ರೋಡ್ ಹಂಪ್ಸ್‌ ತೆರವು; ಅಧಿಕಾರಿಗಳ ಕಣ್ಣು ತೆರಸಿದ ವಿ.ಟಿವಿ ವರದಿ

- Advertisement -
- Advertisement -

ವಿಟ್ಲ: ಅಕ್ರಮ ಹಂಪ್ಸ್‌ನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದ್ದು ಈ ಬಗ್ಗೆ ಸವಿಸ್ತಾರವಾಗಿ ವಿ.ಟಿವಿ ತಂಡ ವರದಿ ಮಾಡಿತ್ತು. ವಿಟ್ಲದ ಸರಕಾರಿ ಆಸ್ಪತ್ರೆ – ದೇವಸ್ಥಾನ ಸಂಪರ್ಕ ರಸ್ತೆಯಲ್ಲಿ ದೂರವಾಣಿ ಕಛೇರಿ ಸಮೀಪ ನಿಯಮ ಬಾಹಿರವಾಗಿ ಯಾವ ಇಲಾಖೆಗಳಿಗೂ ಮಾಹಿತಿ ನೀಡದೇ ಎರಡು ರೋಡ್ ಹಂಪ್ಸ್ ನಿರ್ಮಿಸಲಾಗಿದ್ದು ಸವಾರರ ಪ್ರಾಣಕ್ಕೆ ಕಂಕಟವಾಗಿತ್ತು. ಹಂಪ್‌ನಿಂದ ಬಿದ್ದು ಗಾಯಗೊಂಡವರ ಸಂಖ್ಯೆ 10ಕ್ಕೂ ಅಧಿಕ. ಈ ಸಮಸ್ಯೆಯ ಬಗ್ಗೆ ವಿ.ಟಿವಿ ತಂಡ ವರದಿ ಮಾಡಿ ಅಧಿಕಾರಿಗಳ ಕಣ್ಣು ತೆರೆಸಿದೆ. ಅಕ್ರಮವಾಗಿ ಮಾಡಿದ ಹಂಪ್ಸ್ ಕಾಮಗಾರಿಯನ್ನು ಇದೀಗ ಸಂಬಂಧಪಟ್ಟವರು ತೆರವುಗೊಳಿಸಿದ್ದಾರೆ.

ವಿ.ಟಿವಿ ತನ್ನ ನೈಜ, ನಿಖರ, ನಿರ್ಭೀತ ಸುದ್ದಿಯಿಂದಲೇ ಕರಾವಳಿ ಜನತೆಯ ಮನಗೆದ್ದಿದೆ. ಅಕ್ರಮ, ಭ್ರಷ್ಟಾಚಾರ, ಸಮಸ್ಯೆಗಳ ಬಗ್ಗೆ ನಿಷ್ಠೂರವಾಗಿ ವರದಿ ಮಾಡಿಕೊಂಡು ಬಂದಿದೆ. ಇತ್ತೀಚಿಗೆ ಹಂಪ್ಸ್‌ ತಂದಿಟ್ಟ ಆಪತ್ತಿನ ಬಗ್ಗೆ ವರದಿ ಮಾಡಿತ್ತು. ಸಾರ್ವಜನಿಕ ಸಮಸ್ಯೆಯನ್ನು ಆಲಿಸಿದ ನಮ್ಮ ತಂಡವು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿ ಯಶಸ್ವಿಯಾಗಿದೆ.

ಏನಿದು ಹಂಪ್ಸ್‌ ಸಮಸ್ಯೆ..?!
ಸಾರ್ವಜನಿಕರ ಪ್ರಕಾರ ಕರಾವಳಿ ಪ್ರಾಧಿಕಾರವು ರಸ್ತೆ ನಿರ್ಮಾಣದ ವೇಳೆ ಹಂಪ್ ನಿರ್ಮಾಣ ಮಾಡಿದೆ. ಎಲ್ಲಾ ಹಂಪ್ಸ್‌ಗಳಿಗಿಂತ ಇಲ್ಲಿನ ಹಂಪ್ಸ್‌ ಸ್ವಲ್ಪ ಎತ್ತರ ಜಾಸ್ತಿಯೇ ಇದ್ದು ಸವಾರರಿಗೆ ತೊಂದರೆಯುಂಟುಮಾಡಿತ್ತು. ಹಂಪ್ಸ್ ಹಾಕುವ ವೇಳೆ ಸವಾರರಿಗೆ ಮುನ್ಸೂಚನೆ ಎಂಬಂತೆ ಸಿಗ್ನಲ್ ಬೋರ್ಡ್‌, ರಸ್ತೆಗಳಲ್ಲಿ ಬಿಳಿ ಮಾರ್ಕ್‌ ಹಾಕುವುದು ಸಾಮಾನ್ಯ. ಆದರೆ ರಸ್ತೆ ನಿಯಮಗಳನ್ನು ಗಾಳಿಗೆ ತೂರಿರುವುದು ಸವಾರರ ಪ್ರಾಣಕ್ಕೆ ಆಪತ್ತು ತಂದಿತ್ತು.

ಈ ಹಿಂದೆ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಇಂಜಿನಿಯರ್‌ ಹರೀಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ‘ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕುಂದಾಪುರ ಮೂಲದ ಕಾಂಟ್ರಾಕ್ಟರ್‌ ಈ ಕೆಲಸ ಮಾಡಿದ್ದಾರೆ. ಪ್ರಾಜೆಕ್ಟ್‌ನಲ್ಲಿ ಹಂಪ್ಸ್‌ ಬಗ್ಗೆ ಉಲ್ಲೇಖ ಮಾಡಿಯೇ ಇರಲಿಲ್ಲ. ಆದರೆ ಅವರೇ ಸ್ವ ಇಚ್ಛೆಯಿಂದ ಹಂಪ್ಸ್‌ ನಿರ್ಮಿಸಿದ್ದು ಈಗ ತಲೆಕೆಡಿಸುವಂತಾಗಿದೆ. ಈ ಹಂಪ್ಸ್ ಅನ್ನು ತೆರವುಗೊಳಿಸಲು ಕುಂದಾಪುರ ಮೂಲದ ಕಾಂಟ್ರಾಕ್ಟರ್‌ ಅವರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳ ಒಳಗೆ ಹಂಪ್ಸ್‌ ತೆರವು ಗೊಳಿಸಲಾಗುವುದು’ ಎಂದು ವಿ.ಟಿವಿಗೆ ತಿಳಿಸಿದ್ದರು. ಈಗ ಈ ಎರಡೂ ಹಂಪ್ಸ್‌ಗಳನ್ನು ತೆರವುಗೊಳಿಸಲಾಗಿದೆ.

ಇದು ವಿ.ಟಿವಿ ಇಂಪಾಕ್ಟ್‌..!
ನಮ್ಮ ವೆಬ್‌ಸೈಟ್‌ನಲ್ಲಿ ವರದಿ ಹಾಗೂ ಅಧಿಕಾರಿಗಳಿಗೆ ಕರೆ ಮಾಡಿ ಈ ಸಮಸ್ಯೆಯ ಬಗ್ಗೆ ಹೇಳಿದ್ದೆವು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದರು. ಈಗ ಸಮಸ್ಯೆಯಾಗಿದ್ದ ಎರಡು ಹಂಪ್ಸ್‌ ಅನ್ನು ತೆರವುಗೊಳಿಸಲಾಗಿದೆ. ಜನರು ನಿಟ್ಟುಸಿರು ಬಿಟ್ಟು ಪ್ರಯಾಣಿಸುವಂತಾಗಿದೆ.

- Advertisement -

Related news

error: Content is protected !!