Sunday, June 29, 2025
spot_imgspot_img
spot_imgspot_img

ಮರವಂತೆ ಬಳಿ ಮೀನುಗಾರಿಕ ದೋಣಿ ಮುಳುಗಡೆ, ಈಜಿ ದಡ ಸೇರಿದ ಮೀನುಗಾರರು.

- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದ್ದು, ಅದೃಷ್ಟವಶಾತ್​ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೀನುಗಾರಿಕೆಗೆ ತೆರಳಿದ್ದ ದೋಣಿ ದಿಬ್ಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ದೋಣಿ ಮಗುಚಿ ಬಿದ್ದು, ಓರ್ವ ಮೀನುಗಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಂಗೋಳಿ ಬಂದರಿನ ಆದಿ ಆಂಜನೇಯ ಎಂಬ ದೋಣಿಯಲ್ಲಿ ನಾಲ್ವರು ಮೀನುಗಾರರು ಮರುವಂತೆಯ ಬಳಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದಾಗ ದೋಣಿ ಮಗುಚಿದೆ. ಪರಿಣಾಮ ನಾಲ್ವರು ಸಮುದ್ರಕ್ಕೆ ಹಾರಿದ್ದು, ಅಲ್ಲಿಂದ ಈಜಿ ದಡ ಸೇರಿದ್ದಾರೆ.ಈ ವೇಳೆ ನಾಡ ದೋಣಿಯ ಎರಡು ಇಂಜಿನ್​ಗಳು ಸಮುದ್ರದ ಪಾಲಾಗಿವೆ. ಪದೇ-ಪದೇ ಈ ರೀತಿಯ ಘಟನೆಗಳು ಕರಾವಳಿಯಲ್ಲಿ ಸಂಭವಿಸುತ್ತಿರುವುದರಿಂದ ಮೀನುಗಾರರಲ್ಲಿ ಆತಂಕ ಉಂಟಾಗಿದೆ.

- Advertisement -

Related news

error: Content is protected !!