- Advertisement -
- Advertisement -


ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರಖ್ಯಾತ ದೇವಾಲಯವಾದ ಮಧೂರು ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.

ದೇಗುಲದ ಸಮೀಪದ ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿದ್ದು, ನೀರು ದೇವಾಲಯದೊಳಗೆ ಹರಿದುಬಂದಿದ್ದು ದೇಗುಲದ ಸಿಬ್ಬಂದಿಗಳು ಇದರಿಂದ ಪರದಾಡುವಂತಾಗಿದೆ.

ಅಷ್ಟೇ ಅಲ್ಲದೆ ದೇಗುಲದ ಧ್ವಜಸ್ಥಂಭ ಕೂಡಾ ನೀರಿನಿಂದ ಆವೃತಗೊಂಡಿದೆ. ಇನ್ನು ಮಧುವಾಹಿನಿ ಹೊಳೆ ಉಕ್ಕಿ ಹರಿದು ಅಸುಪಾಸಿನಲ್ಲಿ ಇರುವ ತೋಟಗಳಿಗೂ ಹರಿದುಬಂದಿದ್ದು ಇದರಿಂದ ಹಲವು ಕಡೆ ಕೃಷಿಗೂ ಹಾನಿಯಾಗಿದೆ. ಒಟ್ಟಿನಲ್ಲಿ ಈ ಮಳೆಯ ರಗಳೆಯಿಂದ ಭಕ್ತರಿಗೂ ಕೂಡಾ ಪ್ರವೇಶ ಕಷ್ಟವಾಗಿದೆ.


- Advertisement -