- Advertisement -
- Advertisement -

ವಿಟ್ಲ : ಒಡಿಯೂರು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಒಡಿಯೂರು ಶ್ರೀ ವಿವಿದೋದ್ದೇಶ ಸೌಹರ್ದ ಸಹಕಾರಿ ನಿಯಮಿತ, ಒಡಿಯೂರು ಗ್ರಾಮ ವಿಕಾಸಯೋಜನೆ, ಒಡಿಯೂರು ತುಳುಕೂಟ ಇವುಗಳ ಜಂಟಿ ಆಶ್ರಯದಲ್ಲಿ ಒಡಿಯೂರು ಶ್ರೀ ಕ್ಷೇತ್ರದ ರಾಜಾಂಗಣದ ಮುಂಭಾಗದಲ್ಲಿ ನಡೆಯಿತು.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಧ್ವಜಾರೋಹಣ ಮಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಶ್ರೀ ಮಾತನಂದಮಯಿ ಹಾಗೂ ಸಹಕಾರಿಯ ಉಪಾಧ್ಯಕ್ಷರು ನಿರ್ದೇಶಕರು, ಸಿಬ್ಬಂದಿ ವರ್ಗ ಮತ್ತು ಗ್ರಾಮ ವಿಕಾಸ ಯೋಜನೆ ಸಿಬ್ಬಂದಿಗಳು, ಒಡಿಯೂರು ತುಳುಕೂಟದ ಸದಸ್ಯರು ಉಪಸ್ಥಿತರಿದ್ದರು. ಯಶವಂತ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಉರ್ವ ವಂದಿಸಿದರು.


- Advertisement -