- Advertisement -
- Advertisement -


ಪುತ್ತೂರು : ಅನೇಕ ಮೃದು ಧೋರಣೆಗಳಿಂದ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ, ಪುತ್ತೂರಿನ ಡಿವೈಎಸ್ ಪಿ ಗಾನಾ ಪಿ ಕುಮಾರ್ ಅವರ ವರ್ಗಾವಣೆಗೆ ಪೊಲೀಸ್ ಮಹಾನಿರ್ದೇಶಕ ಡಾ.ಎಎ.ಸಲೀಂ ಅದೇಶ ಹೊರಡಿಸಿದ್ದಾರೆ. ಸಿ.ಐ.ಡಿಯಲ್ಲಿದ್ದ ವೀರಯ್ಯ ಹಿರೇಮಠ ಅವರನ್ನು ಪುತ್ತೂರಿನ ನೂತನ ಡಿವೈಎಸ್ ಪಿಯಾಗಿ ನೇಮಕಗೊಳಿಸಲಾಗಿದೆ.
ಇತ್ತ ಗಾನಾ ವರ್ಗಾವಣೆ ಸುದ್ದಿ ತಿಳಿಯುತ್ತಲೆ ಹಿಂದೂ ಸಂಘಟನಗಳು ನಿಟ್ಟುಸಿರು ಬಿಡುತ್ತಿದ್ದಾರೆ. ಪ್ರವೀಣ್ ನಟ್ಟಾರ್ ಕೊಲೆ ಪ್ರಕರಣ ಸೇರಿದಂತೆ ಅನೇಕ ಪುಮುಖ ಪುಕರಣಗಳಲ್ಲಿ ಐ.ಓ. ಆಗಿದ್ದ ಗಾನಾ ಯಶಸ್ಸು ಖಂಡಿದ್ದರು. ಕೆಲವು ಸೂಕ್ಷ್ಮ ಪ್ರಕರಣದ ಸಂದರ್ಭದಲ್ಲಿ ಓಲೈಕೆ ಮಾಡುವ ನೆಪದಲ್ಲಿ ಅನೇಕರ ಕಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗುತ್ತಿದೆ. ಅನೇಕ ಭಾರಿ ಇವರ ವಿರುದ್ಧ ಹಿಂದೂ ಜಾಗರಣಾ ವೇದಿಕ ನಾಯಕರು ಗೃಹ ಸಚಿವರು, ಸಂಸದರು, ಶಾಸಕರಿಗೂ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಲ್ಲದರ ಫಲಶ್ರುತಿಯಾಗಿ ಇವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

- Advertisement -