ವಿಟ್ಲ: ಗೆಳೆಯರ ಬಳಗ ಉರಿಮಜಲು ಇದರ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮವು ಗಣ್ಯತಿಗಣ್ಯರ ಸಮ್ಮುಖದಲ್ಲಿ ನಡೆದಿದೆ.
ಈ ಗೆಳೆಯರ ಬಳಗವು 25ವರ್ಷದಿಂದ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದು, ಹಲವು ದೇವಸ್ಥಾನಗಳಲ್ಲಿ ಶ್ರಮದಾನ ಮೂಲಕ ಸ್ವಚ್ಛತೆ ಹಾಗೂ ಹಲವು ಕೆಲಸಕಾರ್ಯಗಳನ್ನ ಮಾಡುತ್ತ ಗುರುತುಸಿಕೊಂಡಿದೆ ಇದೀಗಾ ಇದರ ನೂತನವಾಗಿ ನಿರ್ಮಿಸಿದ ಕಾರ್ಯಾಲಯ ಉದ್ಘಾಟನೆ ನಡೆದಿದೆ.
ಈ ಕಾರ್ಯಕ್ರಮಕ್ಕೆ ದೀಪಾಪ್ರಜ್ವಲನೆ ಮೂಲಕ ಚಾಲನೆ ನೀಡಲಾಯಿತು. ದೀಪಾಪ್ರಜ್ವಲನೆಯನ್ನ ಶ್ರೀ ಷಣ್ಮುಖ ದೇವಸ್ಥಾನ ಕೋಲ್ಪೆ ಇದರ ಆಡಳಿತ ಮೋಕ್ತೆಸರರಾದ ಸುರೇಶ್ ಕೆ.ಎಸ್ ಮುಕ್ಕುಡ ಹಾಗೂ ಕೆ.ಟಿ ವೆಂಕಟೇಶ್ವರ ನೂಜಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಪುಲ್ಲ ಚಂದ್ರ ಕೋಲ್ಪೆ, ರಮೇಶ್ ಆಳ್ವ ಉರಿಮಜಲು, ಶಿವರಾಮ ಭಟ್, ವಿ.ಕೆ ಕುಟ್ಟಿ ಉರಿಮಜಲು, ಹರೀಶ್ ಡಿ ದೇವಸ್ಯ, ಮೋಹನ್ ಭಟ್ ಕೆ.ಎಸ್, ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಕೊಡೆಂಚಾರಪಾಲು, ಬಾಗೀರತಿ ಕೋಲ್ಪೆ, ರಾಜೇಶ್ ಕೊಡಿಜಾಲು, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಸಂಚಾಲಕ ರಾಮ್ದಾಸ್ ಶೆಟ್ಟಿ, ಸತೀಶ್ ಮೂಡೈಮಾರ್, ಜಗದೀಶ್ ದೇವಸ್ಯ ಹಾಗೂ ಗೆಳೆಯರ ಬಳಗದ ಕಾರ್ಯದರ್ಶಿ ಉಮೇಶ್ ಹಾಗೂ ಗೆಳೆಯರ ಬಳಗದ ಸರ್ವಸದಸ್ಯರು ಉಪಸ್ಥಿತರಿದ್ದರು.