Sunday, June 29, 2025
spot_imgspot_img
spot_imgspot_img

ಬಂಟ್ವಾಳ: ಬಾವಿ ಸ್ವಚ್ಛಗೊಳಿಸಲು ಇಳಿದಿದ್ದ ವ್ಯಕ್ತಿ ಅಸ್ವಸ್ಥ; ಅಗ್ನಿಶಾಮಕ ದಳದಿಂದ ರಕ್ಷಣೆ

- Advertisement -
- Advertisement -
vtv vitla

ಬಂಟ್ವಾಳ: ಮನೆಯ ಬಾವಿಯನ್ನು ಸ್ವಚ್ಛಗೊಳಿಸಲು ಬಾವಿಗೆ ಇಳಿದ ವ್ಯಕ್ತಿ ನಿತ್ರಾಣಗೊಂಡು ಬಾವಿಯಿಂದ ಮೇಲೆ ಬರಲು ಆಗದೇ ಒದ್ದಾಡಿದ್ದು, ಸ್ಥಳಕ್ಕೆ ಬಂಟ್ವಾಳ ಅಗ್ನಿ ಶಾಮಕ ತಂಡ ಆಗಮಿಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಬಂಟ್ವಾಳ ತಾಲೂಕಿನ ಗಾಣದಪಡ್ಪು ಎಂಬಲ್ಲಿನ ಬಿ.ವಾಸು ಪೂಜಾರಿ ಎಂಬವರು ಬಾವಿಯನ್ನು ಸ್ವಚ್ಛಗೊಳಿಸುವ ವೇಳೆ ಅಸ್ವಸ್ಥಗೊಂಡವರು.

ಅಗ್ನಿ ಶಾಮಕ ಸಿಬ್ಬಂದಿ ನಂದಪ್ಪ ನಾಯೋಡಿಯರವರು ಬಾವಿಗೆ ಇಳಿದು ವಿ.ವಾಸು ಪೂಜಾರಿಯವರನ್ನು ಯಾವುದೇ ಪ್ರಾಣಾಪಾಯ ಇಲ್ಲದೆ ಮೇಲಕ್ಕೆತ್ತಿ ರಕ್ಷಿಸಿದರು. ಬಂಟ್ವಾಳ ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಯು.ರವೀಂದ್ರ, ಸಿಬ್ಬಂದಿ ಪುರುಷೋತ್ತಮ, ರೋಹಿತ್ ರುಕ್ಕಯ್ಯ ಅಮೀನ್ ಹಾಗೂ ಗ ಹರಕ್ಷಕ ದಳದ ಸಿಬ್ಬಂದಿ ಜಯಗಣೇಶ ಮತ್ತಿತರರು ಕಾರ್ಯಚರಣೆಯಲ್ಲಿದ್ದರು.

- Advertisement -

Related news

error: Content is protected !!