- Advertisement -
- Advertisement -

ಪುತ್ತೂರು: ಕೆದಂಬಾಡಿ ಬೀಡು ಶ್ರೀ ಪಟ್ಟದ ಚಾವಡಿ ಶ್ರೀ ಧರ್ಮದೈವ ಪಿಲಭೂತ ದೈವಸ್ಥಾನ, ಪುತ್ತೂರು ಇಲ್ಲಿ ನವೆಂಬರ್13 ಆದಿತ್ಯವಾರದಿಂದ 14 ಸೋಮವಾರದವರೆಗೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಲ್ಲಿ “ವರ್ಷಾವಧಿ ಗದ್ದೆ ಕೋರಿ ಜಾತ್ರೋತ್ಸವ ಮತ್ತು ಶ್ರೀ ದೈವದ ನೇಮೋತ್ಸವ” ಜರಗಿತು.


ನ.13ರಂದು ರಾತ್ರಿ ಪೂಕರೆ ಗದ್ದೆಗೆ ಲಕ್ಷದೀಪೊತ್ಸವ ನಡೆಯಿತು. ನ.14ರಂದು ಪೂಕರೆ ರಥೋತ್ಸವ ಮತ್ತು ಶ್ರೀ ದೈವದ ನೇಮೋತ್ಸವ ನಡೆಯಿತು. ಈ ವೇಳೆ ಊರಿನ ನೂರಾರು ಭಕ್ತಾದಿಗಳು ಭಾಗವಹಿಸಿದರು.



- Advertisement -