Saturday, June 28, 2025
spot_imgspot_img
spot_imgspot_img

ಬಿ.ಸಿ.ರೋಡ್‌: (ಡಿ.06) ಹಿಂ.ಜಾ.ವೇ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

- Advertisement -
- Advertisement -
vtv vitla

ಬಿ.ಸಿ ರೋಡ್‌: ಹಿಂದು ಜಾಗರಣ ವೇದಿಕೆ, ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಡಿ. 06ರಂದು ಬೆಳಗ್ಗೆ ಗಂಟೆ 10.00 ರಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಜರಗಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಜ್ಯೋತಿಷ್ಯರಾದ ವೆಂಕಟ್ರಮಣ ಮುಚ್ಚಿನ್ನಾಯ ಕಾರಿಂಜ ವಹಿಸಲಿದ್ದರೆ. ರಾಜಶೇಖರಾನಂದ ಸ್ವಾಮೀಜಿ, ಶ್ರೀ ವಜ್ರದೇಹಿ ಮಠ, ಗುರುಪುರ, ಗೌರವಾಧ್ಯಕ್ಷರು, ಹಿಂ,ಜಾ,ವೇ, ಕರ್ನಾಟಕ ರಾಜ್ಯ ಇವರು ಆಶೀರ್ವಚನ ನೀಡಲಿದ್ದರೆ.

ದಿಕ್ಸೂಚಿ ಭಾಷಣ ದೋ. ಕೇಶವ ಮೂರ್ತಿ ಪ್ರಾಂತ ಸಂಚಾಲಕರು, ಹಿಂ.ಜಾ.ವೇ ದಕ್ಷಿಣ ಕರ್ನಾಟಕ ಇವರು ಮಾಡಲಿದ್ದರೆ.ಬೆಳಿಗ್ಗೆ 9.00 ರಿಂದ 10.00 ಗಂಟೆವರೆಗೆ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12.00 ರಿಂದ 12.30ರವರೆಗೆ ಮಹಾಪೂಜೆ ನಡೆದು ನಂತರ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!