Sunday, June 29, 2025
spot_imgspot_img
spot_imgspot_img

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ನೆರೆಮನೆಯ ವ್ಯಕ್ತಿ

- Advertisement -
- Advertisement -

ನೆರೆಮನೆಯ ವ್ಯಕ್ತಿಯೊಂದಿಗೆ ಮಾತಿನ ಚಕಮಕಿ ನಡೆದು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ತ್ರಿಶೂರ್‌ನ ಎರುಮಾಪೇಟಿ ಕೈಪ್ರಾ ನಿವಾಸಿ ಮನೋಜ್ ಎನ್ನಲಾಗಿದೆ. ಥಾಲಿಯಲ್ಲಿ ಈ ಘಟನೆ ನಡೆದಿದೆ.

ನವೆಂಬರ್ 28 ರಂದು ಈ ಘಟನೆ ನಡೆದಿದೆ. ಮಾತಿನ ಚಕಮಕಿಯಲ್ಲಿ ನೆರೆಮನೆಯ ಗೋಕುಲ್ ಎಂಬಾತ ಮನೋಜ್‌ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರ ಸುಟ್ಟು ಗಾಯವಾದ ಮನೋಜ್ ಅವರನ್ನು ಶೂರ್ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಮನೋಜ್ ಅಸುನೀಗಿದ್ದಾರೆ.

ವಿರುಟ್ಟಣಂ ಮೂಲದ ಗೋಕುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!