Friday, June 27, 2025
spot_imgspot_img
spot_imgspot_img

ವಿಟ್ಲ : ಕೆಂಪುಕಲ್ಲು ಪಾಯ ಮಾಲಕರು ಹಾಗೂ ಕೆಂಪು ಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯದ ವಾರ್ಷಿಕ ಮಹಾಸಭೆ, ಪದಗ್ರಹಣ ಕಾರ್ಯಕ್ರಮ

- Advertisement -
- Advertisement -

ವಿಟ್ಲ : ಕೆಂಪುಕಲ್ಲು ಪಾಯ ಮಾಲಕರು ಹಾಗೂ ಕೆಂಪು ಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆಯು ವಿಟ್ಲ ಬೊಬ್ಬೆಕ್ಕೇರಿ ಗಜಾನನ ಸಭಾ ಭವನದಲ್ಲಿ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಸುನಿಲ್ ರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ, ಕಾರ್ಯದರ್ಶಿ ರವಿ ರೈ, ಬಂಟ್ವಾಳ ವಲಯದ ಅಧ್ಯಕ್ಷ ಮೋಹನ್ ಶೆಟ್ಟಿ , ಮುಡಿಪು ವಲಯದ ಅಧ್ಯಕ್ಷ ವಿಶ್ವನಾಥ ರೈ, ಕಾರ್ಯದರ್ಶಿ ನವೀನ್ ಶೆಟ್ಟಿ, ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಮೇಶ್ ವರಪ್ಪಾದೆ, ಉಪಾಧ್ಯಕ್ಷ ಶರೀಫ್ ಒಕ್ಕೆತ್ತೂರು, ಕಾರ್ಯದರ್ಶಿ ಹರೀಶ್ ಎಸ್ ಪಿ, ಜತೆಕಾರ್ಯದರ್ಶಿ ದಿನೇಶ್ ಕಬಕ, ಕೋಶಾಧಿಕಾರಿ ನಾಗೇಶ್ ಬಸವನಗುಡಿ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಡಕುಟುಂಬದ ಲೋಲಾಕ್ಷಿ ಮತ್ತು ಅನೀಸ ಎಂಬವರಿಗೆ ತಲಾ 10 ಸಾವಿರ ರೂಪಾಯಿ ಧನಸಹಾಯ ನೀಡಲಾಯಿತು. ಸಂಜೀವ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು. ಸಂಘದ ಕಾರ್ಯದರ್ಶಿ ಇಸ್ಮಾಯಿಲ್ ಅರಾಫತ್ ವರದಿ ವಾಚಿಸಿದರು. ಹರೀಶ್ ಎಸ್ ಪಿ ವಂದಿಸಿದರು.

- Advertisement -

Related news

error: Content is protected !!