Sunday, June 29, 2025
spot_imgspot_img
spot_imgspot_img

ದುಬೈನಿಂದ ಗೆಳೆಯನ ಭೇಟಿಗೆಂದು ಬಂದಿದ್ದ ಗಗನಸಖಿ ಅನುಮಾನಾಸ್ಪದವಾಗಿ ಸಾವು..!!

- Advertisement -
- Advertisement -
vtv vitla

ಬೆಂಗಳೂರು: ಗೆಳೆಯನ ಭೇಟಿಗೆಂದು ಬಂದ ಯುವತಿ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

28 ವರ್ಷದ ಅರ್ಚನಾ ಧೀಮನ್ ಸಾವನ್ನಪ್ಪಿದ ಯುವತಿ. ದುಬೈನ ಖಾಸಗಿ ಏರ್​​ಲೈನ್ಸ್​​ನಲ್ಲಿ ಕೆಲಸ ಮಾಡಿಕೊಂಡಿದ್ದ ಅರ್ಚನಾ, ಕೋರಮಂಗಲದಲ್ಲಿರುವ ಗೆಳೆಯನ ಭೇಟಿಗೆ ಬಂದಿದ್ದರು. ಅರ್ಚನಾ ಗೆಳೆಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕೋರಮಂಗಲದ ರೇಣುಕಾ ರೆಸಿಡೆನ್ಸಿಯಲ್ಲಿ ವಾಸವಾಗಿದ್ದನು. ಮೃತ ಅರ್ಚನಾ ಧೀಮನ್ ಮೂಲತಃ ಹಿಮಾಚಲ ಪ್ರದೇಶದವರು ಎಂದು ತಿಳಿದು ಬಂದಿದೆ.

ಮಧ್ಯರಾತ್ರಿ ಸುಮಾರು 12 ಗಂಟೆಗೆ ಅರ್ಚನಾ ಧೀಮನ್ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಶವವನ್ನು ಸೇಂಟ್ ಜಾನ್ಸ್​ ಆಸ್ಪತ್ರೆಯಲ್ಲಿರಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.

ಇನ್ನು ಅರ್ಚನಾ ಗೆಳೆಯ ಆದೀಶ್ ಸುತ್ತ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಅರ್ಚನಾ ಗೆಳೆಯ ಆದೀಶ್​ನನ್ನು ಭೇಟಿಯಾಗಲು ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಕಳೆದ ಕೆಲ ವರ್ಷಗಳಿಂದ ಅರ್ಚನಾ ಮತ್ತು ಆದೀಶ್ ಪ್ರೀತಿಸುತ್ತಿದ್ದು, ಇದೀಗ ಗೆಳೆಯನ ಭೇಟಿಗೆ ಬಂದ ಅರ್ಚನಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆದೀಶ್ ಕೇರಳ ಮೂಲದವನು ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಇಬ್ಬರ ಮಧ್ಯೆ ಏನಾಗಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಬ್ಬರ ಮಧ್ಯೆ ಜಗಳ ನಡೆದು ಅರ್ಚನಾಳನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಲಾಗಿದೆಯಾ ಎಂಬ ಆಯಾಮಾದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಅಪಾರ್ಟ್​​​ಮೆಂಟ್​​ ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!