- Advertisement -
- Advertisement -
ಕಡಬ: ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಕಡಬ ತಾಲೂಕು ಕೊಣಾಲು ಗ್ರಾಮದ ಮಣ್ಣಮಜಲು ನಿವಾಸಿ ಬಿಜು ಥೋಮಸ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಪರಾರಿಯಾಗುವ ಉದ್ದೇಶದಿಂದ ಬಸ್ ನಿಲ್ದಾಣದ ಬಳಿಯಿದ್ದಾಗ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ತನ್ನ ಕುಡಿತದ ಚಟದಿಂದ ತನ್ನ ಪತ್ನಿ ಶೈನಿ ಹಾಗೂ ಅವರ ಸಂಬಂಧಿ ಝಾನ್ಸಿ ಎಂಬವರ ಮೇಲೆ ದ್ವೇಷದಿಂದ ಕೊಲ್ಲುವ ಉದ್ದೇಶ ಹೊಂದಿದ್ದು ಈ ಕೃತ್ಯ ನಡೆಸಿರುವುದಾಗಿ ಕಂಡುಬಂದಿದ್ದು, ತನಿಖೆ ನಡೆಯುತ್ತಿದೆ.
ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಯು ರವರ ಮಾರ್ಗದರ್ಶನ ದಂತೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ಈರಯ್ಯ ಡಿ ಎನ್ ರವರ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಯಿತು ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹರೀಶ್ ಗೌಡ, ಕೃಷ್ಣಪ್ಪ ನಾಯ್ಕ,ಹರಿಶ್ಚಂದ್ರ, ಗಣೇಶ್, ಸಂಗಯ್ಯ, ಇರ್ಷಾದ್, ಜಗದೀಶ್,ಚಂದ್ರಶೇಖರ್ ,ಪ್ರತಾಪ್,ನವೀನ್, ಭಾಗವಹಿಸಿರುತ್ತಾರೆ.
- Advertisement -