Saturday, June 28, 2025
spot_imgspot_img
spot_imgspot_img

ಕಾರ್ಕಳ: ಸದ್ದಿಲ್ಲದೆ ಸಾಗುತ್ತಿದೆ ಕಾರ್ಕಳದ ನಿಟ್ಟೆ ಪರಿಸರದಲ್ಲಿ ಲವ್ ಜಿಹಾದ್‌..!? ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ ಅಬ್ದುಲ್ ಜಬ್ಬಾರ್ ವಿರುದ್ಧ ಕ್ರಮ

- Advertisement -
- Advertisement -

ಕಾರ್ಕಳ: ಕೆಲ ದಿನಗಳ ಹಿಂದಷ್ಟೇ ಸದ್ದಿಲ್ಲದೆ ಸಾಗುತ್ತಿದೆ ಕಾರ್ಕಳದ ನಿಟ್ಟೆ ಪರಿಸರದಲ್ಲಿ ಲವ್ ಜಿಹಾದ್‌. ಫಾರೂಕ್ ಮತ್ತು ಶಾರೂಖ್ ಎಂಬ ಕೋಮು ಕ್ರಿಮಿಗಳಿಂದ ವ್ಯವಸ್ಥಿತ ಲವ್ ಜಿಹಾದ್‌ ದಂಧೆ ಎಂಬ ಟೈಟಲ್‌ನೊಂದಿಗೆ ಸುದ್ದಿಯೊಂದು ಹರಿದಾಡುತ್ತಿತ್ತು. ಅಷ್ಟು ಮಾತ್ರವಲ್ಲದೆ instagram ಖಾತೆಯಲ್ಲೂ ಈ ಬಗ್ಗೆ ಬರೆದು ಹಾಕಿದ್ದರು.

ಇದರ ಜಾಡು ಹಿಡಿದ ಪೊಲೀಸರಿಗೆ ಅಸಲಿ ಸತ್ಯ ತಿಳಿದುಬಂದಿದೆ. ಮುಸ್ಲಿಂ ವ್ಯಕ್ತಿಯೋರ್ವನೇ ಈ ಸಂದೇಶವನ್ನು ಮೊದಲಿಗೆ ರವಾನಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ದಿಲ್ಲದೆ ಸಾಗುತ್ತಿದೆ ಕಾರ್ಕಳದ ನಿಟ್ಟೆ ಪರಿಸರದಲ್ಲಿ ಲವ್ ಜಿಹಾದ್‌, ಫಾರೂಕ್ ಮತ್ತು ಶಾರೂಖ್ ಎಂಬ ಕೋಮು ಕ್ರಿಮಿಗಳಿಂದ ವ್ಯವಸ್ಥಿತ ಲವ್ ಜಿಹಾದ್‌ ದಂಧೆ ! ಶೀರ್ಷಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ವೈರತ್ವ, ದ್ವೇಷ ಹುಟ್ಟು ಹಾಕಿ ಸಮಾಜದ ಭಾವೈಕ್ಯತೆಗೆ ಧಕ್ಕೆಯನ್ನುಂಟು ಮಾಡಿರುವ ವ್ಯಕ್ತಿಯ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಟ್ಟೆಯ ಅಬ್ದುಲ್ ಜಬ್ಬಾರ್ ಎಂಬಾತನು ಸುಳ್ಳು ಸಂದೇಶಗಳನ್ನು ರವಾನಿಸಿ, ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಮಧ್ಯೆ ವೈರತ್ವ, ದ್ವೇಷ ಬೆಳೆಸುವ ವದಂತಿಗಳನ್ನು ಎ. 24ರಂದು ಹರಿ ಬಿಟ್ಟಿರುತ್ತಾನೆ. ಈ ಬಗ್ಗೆ ನಿಟ್ಟೆ ಬೋರ್ಗಲ್ ಗುಡ್ಡೆ ಉಮರುಲ್ ಫಾರೂಕ್ ಅವರು ಎ. 26ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಬ್ದುಲ್ ಜಬ್ಬಾರ್ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ.

ಇನ್ನು ಹಿಂದೂ ಧರ್ಮ ಎಂಬ Instagram ಖಾತೆಯಲ್ಲಿ ಫಾರುಕ್ ಮತ್ತು ಶಾರುಕ್‌ ಎಂಬ ಯುವಕರ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು. ಹಿಂದೂ ಧರ್ಮ ಎಂಬ Instagram ಖಾತೆಯಲ್ಲಿ ಇಬ್ಬರ ಕರ್ಮಕಾಂಡವನ್ನು ವಿವರಿಸಲಾಗಿತ್ತು.

- Advertisement -

Related news

error: Content is protected !!