Sunday, June 29, 2025
spot_imgspot_img
spot_imgspot_img

(ಅ.19) ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಸಹಯೋಗದಲ್ಲಿ ದ್ವಾದಶಾಕ್ಷರೀ ಮಂತ್ರದ ಪಂಚಲಕ್ಷ ಪಠಣ

- Advertisement -
- Advertisement -

ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಗಮನ

ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಸಹಯೋಗದಲ್ಲಿ ದ್ವಾದಶಾಕ್ಷರೀ ಮಂತ್ರದ ಪಂಚಲಕ್ಷ ಪಠಣ ಕಾರ್ಯಕ್ರಮವು ಅ.19ನೇ ಶನಿವಾರದಂದು ಪೂರ್ವಾಹ್ನ 5:20ರಿಂದ ಪೂರ್ವಾಹ್ನ 9:30ರ ವರೆಗೆ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ.

ದೀಪೋಜ್ವಲನ, ದೇವರಿಗೆ ಹಾರಾರ್ಪಣೆ, ಪುಷ್ಪ ನಾಮಾರ್ಚನೆ, ಮಂಗಳಾರತಿಯೊಂದಿಗೆ ದಿವ್ಯಮಂತ್ರಪಠಣ ಸಂಪನ್ನವಾಗಲಿದೆ.

ಉಡುಪಿ ಪೇಜಾವರ ಮಠದ ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸಮಾರೋಪದಲ್ಲಿ ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಅಣ್ಣುಕುಲಾಲ್ ಚೆಂಡುಕಳ, ಗೋಪಾಲಕೃಷ್ಣ ಮಹಾಮಾಯಿ ಭಜನಾ ಮಂದಿರ ಆನೆಪದವು, ಸದಾಶಿವ ಶಾರದಾವಿಹಾರ, ಸದಾಶಿವ ಶೆಟ್ಟಿ. ಯಂ. ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಚಂದ್ರಶೇಖರ ಮಡಿಯಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಧಾನ ಉಪಸ್ಥಿತರಾಗಿ ಪದ್ಮನಾಭ ಪೂಜಾರಿ, ಸಣ್ಣಗತ್ತು ಅಧ್ಯಕ್ಷರು, ಅಳಿಕೆ ಗ್ರಾಮ ಪಂಚಾಯತ್, ರಘು. ಟಿ. ವೈ. ಮುಖ್ಯ ಗುರುಗಳು, ಅಳಿಕೆ. ಭಾಗವಹಿಸಲಿದ್ದಾರೆ.

ಭಕ್ತಾದಿಗಳೆಲ್ಲರೂ ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!