Sunday, June 29, 2025
spot_imgspot_img
spot_imgspot_img

ಓವರ್​ಟೇಕ್ ಮಾಡಲು ಹೋಗಿ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಬಸ್​; ನಾಲ್ವರು ಸಾವು

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ವೇಗವಾಗಿ ಬಂದ ಬಸ್​ ಟ್ರ್ಯಾಕ್ಟರ್ ಟ್ರ್ಯಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಲಿಯಲ್ಲಿದ್ದ ನಾಲ್ವರು ಮೃತಪಟ್ಟಿದ್ದು, 9 ಜನರಿಗೆ ಗಂಭೀರ ಗಾಯಗೊಂಡ ಘಟನೆ ಕೊಪ್ಪಳದ ಹೊಸಲಿಂಗಾಪುರ ಬಳಿ ನಡೆದಿದೆ.

ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ನಡೆದಿದ್ದ ಘಟನೆ ಇದಾಗಿದೆ. ಸಾವನ್ನಪ್ಪಿದವರು ಯಲಬುರ್ಗಾದ ಕರಮುಡಿ ಮೂಲದವರು ಎಂದು ಗುರುತಿಸಲಾಗಿದೆ.

ಒಂದೇ ಕುಟುಂಬದವರು ಯಲಬುರ್ಗಾದಿಂದ ಹುಲಿಗಿ ದರ್ಶನಕ್ಕೆ ಟ್ರ್ಯಾಕ್ಟರ್​ನಲ್ಲಿ ಬಂದಿದ್ದರು. ದರ್ಶನ ಪಡೆದು ಮನೆಗೆ ಮರಳುವಾಗ ವೇಗವಾಗಿ ಬಂದ ಬಸ್​ವೊಂದು ಟ್ರ್ಯಾಕ್ಟರ್​ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿತ್ತು. ಸುಮಾರು 25 ಕ್ಕೂ ಹೆಚ್ಚು ಜನರು ಟ್ರ್ಯಾಕ್ಟರ್​ನಲ್ಲಿ ಇದ್ದರು. ಅಪಘಾತ ಸಂಭವಿಸಿದಂತೆ ಬಸ್​ ಚಾಲಕ ಪರಾರಿಯಾಗಿದ್ದಾನೆ.

ಸುಮಾರು 9 ಜನರಿಗೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಯಶೋಧಾ ವಂಟಗೋಡಿ. ಬಸ್ ಚಾಲಕನಿಂದ ಈ ಅಪಘಾತ ನಡೆದಿದೆ ಎಂದು ಹೇಳಿದ್ದಾರೆ. ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಇದ್ದವರು ಕೈಯಲ್ಲಿ ಸಿಗ್ನಲ್​ ಮಾಡಿದ್ರು, ಆದರೂ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಆಗಿದೆ. ಅಪಘಾತ ಹಿನ್ನೆಲೆ ರಾತ್ರಿಯೆಲ್ಲ ಟ್ರಾಫಿಕ್ ಜಾಮ್ ಆಗಿದೆ ಎಂದು ಹೇಳಿದ್ದಾರೆ.

ಪೊಲೀಸರು ಬಸ್, ಟ್ರ್ಯಾಕ್ಟರ್ ತೆರವುಗೊಳಿಸಲು ರಾತ್ರಿಯೆಲ್ಲ ಹರಸಹಾಸ ಪಟ್ಟಿದ್ದಾರೆ. ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

- Advertisement -

Related news

error: Content is protected !!