Saturday, April 27, 2024
spot_imgspot_img
spot_imgspot_img

ಕೌಟುಂಬಿಕ ಕಲಹ; ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆಗೆ ಯತ್ನ..!

- Advertisement -G L Acharya panikkar
- Advertisement -

ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಟೌನ್​ನಲ್ಲಿ ನಡೆದಿದೆ.

ಪತಿ ಮುಬಾರಕ್​​(28) ಎಂಬಾತ ಪತ್ನಿ ಅರ್ಬಿಯಾ ತಾಜ್​(24) ಎಂದು ಗುರುತಿಸಲಾಗಿದೆ.

ಕೊಲೆಯಾದ ಮಹಿಳೆ, ಗಂಡನ ಕಿರುಕುಳಕ್ಕೆ ಬೇಸತ್ತು ತಿಂಗಳ ಹಿಂದೆ ತವರಿಗೆ ಹೋಗಿದ್ದರು. ಈ ಹಿನ್ನಲೆ ವಾರದ ಹಿಂದೆಯಷ್ಟೇ ಪತ್ನಿ ಮನೆಗೆ ಬಂದಿದ್ದ ಆರೋಪಿ ಪತಿ ಮುಬಾರಕ್​, ಅರ್ಬಿಯಾ ತಾಜ್​ಳನ್ನು ಮನೆಗೆ ಬರಲು ಕರೆದಿದ್ದಾನೆ. ಆದರೆ, ಗಂಡನ ಮನೆಗೆ ಹೋಗಲು ಪತ್ನಿ ಹಿಂದೇಟು ಹಾಕಿದ್ದಾಳೆ. ಬಳಿಕ ಮುಬಾರಕ್​ ಹಾಗೆಯೇ ಹೋಗಿದ್ದ. ಇಂದು ವಾಪಸ್ ತನ್ನ ಮನೆಗೆ ಬರುವಂತೆ ಪತಿ ಬಂದು ಒತ್ತಾಯಿಸಿದ್ದಾನೆ. ಮತ್ತೆ ಬರಲು ನಕಾರ ಮಾಡಿದ ಹಿನ್ನೆಲೆ ಪತ್ನಿಯನ್ನ ಮಾರಕಾಸ್ತ್ರದಿಂದ ಕೊಲೆಗೈದಿದ್ದಾನೆ.

ಇನ್ನು ಪತ್ನಿ ಅರ್ಬಿಯಾ ತಾಜ್​ಳನ್ನ ಮಚ್ಚಿನಿಂದ ಹಲ್ಲೆ ಮಾಡಿದೊಡನೆ ಕೂಗಾಡಿದ್ದಾಳೆ. ಇದನ್ನು ಕೇಳಿದ ತಕ್ಷಣ ಮೃತ ಮಹಿಳೆ ತಾಯಿ ನೆರವಿಗೆ ಧಾವಿಸಿದ್ದಾಳೆ. ಈ ವೇಳೆ ಪತಿ ಮುಬಾರಕ್​ ಬಾಗಿಲು ಲಾಕ್ ಮಾಡಿ ಆತ್ಮಹತ್ಯೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಜಿಗಣಿ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!