Sunday, June 29, 2025
spot_imgspot_img
spot_imgspot_img

ವಿಧಾನಸೌಧದ ಮುಂದೆಯೇ ದಂಪತಿ ಆತ್ಮಹತ್ಯೆಗೆ ಯತ್ನ..!

- Advertisement -
- Advertisement -

ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಧಾನಸೌಧ ಮೂರನೇ ಗೇಟ್ ಬಳಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ದಂಪತಿಯನ್ನು ಶಾಹಿಸ್ತ ಬಾನು ಗಂಡ ಮುನಾಯಿದುಲ್ಲಾ ಎಂದು ಗುರುತಿಸಲಾಗಿದೆ.

ವ್ಯಾಪಾರಕ್ಕಾಗಿ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ಈ ದಂಪತಿ ಬ್ಯಾಂಕ್ ಸಿಬ್ಬಂದಿ ವಿರುದ್ದ ಕಿರುಕುಳ ನೀಡಿದ ಆರೋಪ ಮಾಡಿದೆ.ಶಾಹಿಸ್ತ ಬಾನು ಗಂಡ ಮುನಾಯಿದುಲ್ಲಾ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಆಸ್ತಿ ಅಡಮಾನ ಮಾಡಿ 50 ಲಕ್ಷ ಸಾಲ ಪಡೆದಿದ್ದಾರೆ. ಆದರೆ 97 ಲಕ್ಷ ರೂಪಾಯಿ ಸಾಲ ಮರು ಪಾವತಿ ಮಾಡಲಾಗಿದೆ. ಆದರೂ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ವಿಧಾನಸೌಧದ ಮೂರನೇ ಗೇಟ್ ಮುಂಭಾಗ ಬಂದ ಈ ದಂಪತಿ ಅನ್ಯಾಯ, ಅನ್ಯಾಯ ಎಂದು ಸೀಮೆಎಣ್ಣೆಯನ್ನು ಮೈ ಮೇಲೆ ಸುರಿದುಕೊಳ್ಳೋ ಪ್ರಯತ್ನ ಮಾಡಿದರು. ಆಗ ಪೊಲೀಸರು ಅವರನ್ನು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಪಾದರಾಯನಪುರದಲ್ಲಿ ಈ ಕುಟುಂಬ ನೆಲೆಸಿದೆ. ಸಚಿವ ಜಮೀರ್ ಅಹ್ಮದ್ ಖಾನ್ ತಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೂ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಈ ರೀತಿ ಮಾಡಿರಿವುದಾಗಿ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!