- Advertisement -
- Advertisement -



ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ ವಿಷ್ಣುನಗರ ಇಲ್ಲಿನ ಜಾತ್ರಾ ಮಹೋತ್ಸವದ ಅಂಗವಾಗಿ ತಮ್ಮ ವಿನೂತನ ಕಾರ್ಯಕ್ರಮಗಳ ಮೂಲಕ ಮೂಲಕ ಕರಾವಳಿ ಕರ್ನಾಟಕದಾದ್ಯಾಂತ ಅಪಾರ ಜನಮನ್ನಣೆ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ-ಕಂಬಳಬೆಟ್ಟು, ಕಲಾ ತಂಡದಿಂದ ಇಂದು ರಾತ್ರಿ 7:00ಗಂಟೆಯಿಂದ ಅಮೋಘ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕಿ ಕು. ರೆಮೋನಾ ಇವೆಟ್ಟ್ ಪಿರೇರಾ,ಪ್ರಖ್ಯಾತ ನೃತ್ಯಗಾರರಾಗಿರುವ ನಿಶಾಂತ್ ಶೆಟ್ಟಿ, ವಿದುಷಿ ಅನುಶ್ರೀ ಸಾಮೆತ್ತಡ್ಕ, ಗಾಯಕರಾದ ಚರಣ್ ಅಮೈ, ಮಮತಾ ಕಲ್ಲಡ್ಕ, ಕಲಾತಪಸ್ವಿ ಸಾಂಸ್ಕೃತಿಕ ತಂಡದ ನಿರ್ದೇಶಕರಾದ ಜೈದೀಪ್ ಅಮೈ ಯವರ ನಿರೂಪಣೆಯಲ್ಲಿ, ಇನ್ನೂ ಅನೇಕ ಕಲಾವಿದರ ಸಮಾಗಮದೊಂದಿಗೆ ವೈಭವಯುತವಾಗಿ ಅಮೋಘ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
- Advertisement -








