ಎ. ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಹಾಗೂ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ


ಅಳಕೆಮಜಲು: ಲಯನ್ಸ್ ಕ್ಲಬ್ ವಿಟ್ಲ, ನೇತೃತ್ವದಲ್ಲಿ ಶ್ರೀ ಶಾರದಾಂಬ ಭಜನಾ ಮಂದಿರ ಅಳಕೆಮಜಲು, ಹಾಗೂ ಕಿಸಾನ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಇದರ ಸಹಯೋಗದಲ್ಲಿ, ಎ. ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಹಾಗೂ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ಅಳಕೆ ಮಜಲು ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷ ಲಯನ್ ರಜಿತ್ ಆಳ್ವ ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಶಾರದಾ ಭಜನಾ ಮಂದಿರ ಇದರ ಗೌರವ ಸಲಹೆಗಾರರಾದ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತುರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಲಯನ್ ಡಾ | ಗೀತಾ ಪ್ರಕಾಶ್ ಇವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷ ಜಗದೀಶ್ ಪೂಜಾರಿ ಅಳಕೆಮಜಲು, ಕಿಸಾನ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ನ ಸರ್ವಿಸ್ ಚೇರ್ ಪರ್ಸನ್ ಲಯನ್ ಅಂಥೋನಿ ಲೋಬೊ, ವಲಯ ಅಧ್ಯಕ್ಷ ಲಯನ್ ಸುದೇಶ್ ಭಂಡಾರಿ, ಲಯನ್ ಗಂಗಾಧರ್, ಕಾರ್ಯದರ್ಶಿ ಲಯನ್ ಅರವಿಂದ ರೈ , ಕೋಶಾಧಿಕಾರಿ ಲಯನ್ ಮನೋಜ್ ರೈ , ಮಹಿಳಾ ಸಮಿತಿಯ ಅದ್ಯಕ್ಷೆ ಶ್ರೀಮತಿ ಗೀತಾ ನಾಯ್ಕ್ ಅಳಕೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರದಾ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣ ಕಿಶೋರ್ ಭಟ್ ಸ್ವಾಗತಿಸಿದರು, ಸುಧೀರ್ ನಾಯ್ಕ್ ಕೆಮನಾಜೆ ನಿರೂಪಿಸಿದರು, ಕಾರ್ಯದರ್ಶಿ ಲಯನ್ ಅರವಿಂದ ರೈ ಧನ್ಯವಾದಗೈದರು. ಉಪಾಧ್ಯಕ್ಷ ಉದಯ್ ಕುಲಾಲ್ ಪುಂಡಿಕಾಯಿ ಕಾರ್ಯಕ್ರಮ ನಿರ್ವಹಿಸಿದರು.