Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ: ವೇತನ ಕೇಳಿದ ಕಾರ್ಮಿಕನಿಗೆ ಚಪ್ಪಲಿಯಿಂದ ಹಲ್ಲೆ.!!

- Advertisement -
- Advertisement -

ಬೆಳ್ತಂಗಡಿ: ಹೊಟೇಲ್ ನಲ್ಲಿ ದುಡಿದ ವೇತನ ಕೇಳಿದ್ದಕ್ಕೆ ಮಾಲೀಕ ಕಾರ್ಮಿಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆಗೈದಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಬೆಂಗಳೂರಿನ ಗೊರಗುಂಟೆಪಾಳ್ಯ ಮೂಲದ ವ್ಯಕ್ತಿಯೊಬ್ಬರು ಅಮೃತ ರೆಸ್ಟೋರೆಂಟ್ ನಲ್ಲಿ ಹಲವಾರು ತಿಂಗಳಿಂದ ಕೆಲಸವನ್ನು ಮಾಡುತ್ತಿದ್ದು, ತನ್ನ ವೇತನವನ್ನು ಕೇಳಿದಕ್ಕೆ ರೊಚ್ಚಿಗೆದ್ದ ರೆಸ್ಟೋರೆಂಟ್ ಮಾಲೀಕ ಚಪ್ಪಲ್ಲಿಯಿಂದ ಈ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಧರ್ಮಸ್ಥಳ ಸಮೀಪದ ಕಲ್ಲೇರಿಯಲ್ಲಿ ಈ ಘಟನೆ ನಡೆದಿದ್ದು, ಅಮೃತ ರೆಸ್ಟೋರೆಂಟ್ ಮಾಲೀಕ ಎ ಜೆ ಅಂತೋನಿ ದೌರ್ಜನ್ಯವೆಸಗಿದ ವ್ಯಕ್ತಿ ಎಂದು ಆರೋಪಿಸಲಾಗಿದೆ.

ಇದರೊಂದಿಗೆ, ಕಾರ್ಮಿಕನ ಕೈಯ್ಯಲ್ಲಿದ್ದ ಸುಮಾರು ಮೂರು ಸಾವಿರ ರೂಪಾಯಿ ಹಣವನ್ನು ಕಿತ್ತುಕೊಂಡು ಬೀದಿಗೆ ತಳ್ಳಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಮಾಧ್ಯಮವೊಂದರ ವರದಿಗಾರರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಇದನ್ನು ಗಮನಿಸಿದ ರೆಸ್ಟೋರೆಂಟ್ ಮಾಲೀಕ ಆ ವರದಿಗಾರನ ಮೇಲೆಯೂ ದರ್ಪವನ್ನು ತೋರಿ ಅವಾಜ್ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವರದಿಗಾರ ಮತ್ತು ಸಂತ್ರಸ್ತ ವ್ಯಕ್ತಿಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದು, ಧರ್ಮಸ್ಥಳ ಅಲ್ಲಿನ ಪೊಲೀಸರು ಯಾವುದೇ ಸಹಕಾರ ನೀಡದೆ ಮತ್ತು ದೂರನ್ನು ದಾಖಲಿಸಿಕೊಳ್ಳದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

- Advertisement -

Related news

error: Content is protected !!