Saturday, June 28, 2025
spot_imgspot_img
spot_imgspot_img

ಹೊಲದಲ್ಲಿ ಮಲಗಿದ್ದ ಕುರಿಗಾಯಿಗಳ ಮೇಲೆ ಹರಿದ ಲಾರಿ; ಇಬ್ಬರು ಮೃತ್ಯು..!

- Advertisement -
- Advertisement -

ಕುರಿಗಾಯಿಗಳು ಇಬ್ಬರು ಮಲಗಿದ್ದ ವೇಳೆ ಲಾರಿ ಹರಿದು ಇಬ್ಬರು ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳು ಹತ್ತಿರದ ಬೆಂಚಿಕೊಟ್ಟಲ ಗ್ರಾಮದ ಜಮೀನಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ಚಿತ್ರದುರ್ಗದ ಮೋಳಕಾಲ್ಮುರು ತಾಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ(51), ಎರಿಸ್ವಾಮಿ (20) ಎಂದು ಗುರುತಿಸಲಾಗಿದೆ.

ಇವರಿಬ್ಬರು ಕಬ್ಬಿನ ಹೊಲದಲ್ಲಿ ಕುರಿಗಳನ್ನು ಬಿಟ್ಟು ಮಲಗಿದ್ದರು. ಇದರ ಅರಿವು ಇರದೇ ಚಾಲಕ ಲಾರಿಯಲ್ಲಿ ಕಬ್ಬಿನ ಲೋಡ್ ತುಂಬಿಸಿಕೊಂಡು, ಗಾಡಿ ರಿವರ್ಸ್ ತೆಗೆಯಲು ಮುಂದಾಗಿದ್ದ. ಲಾರಿ ಹಿಂದೆ ಮಲಗಿದ್ದವರ ಮೇಲೆ ಏಕಾಏಕಿ ಹರಿದ ಪರಿಣಾಮ ಇಬ್ಬರು ಮಲಗಿದ್ದಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

- Advertisement -

Related news

error: Content is protected !!