Saturday, June 28, 2025
spot_imgspot_img
spot_imgspot_img

ಹೃದಯಾಘಾತದಿಂದ ವ್ಯಕ್ತಿ ಮೃತ್ಯು..!

- Advertisement -
- Advertisement -

ಉಪ್ಪಿನಂಗಡಿ: ಪತ್ನಿ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಪತಿ ಮೃತಪಟ್ಟಿರುವ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪಾಂಡಿಕಟ್ಟಿ ನಿವಾಸಿ ಸಂಕಪ್ಪ (40) ಎಂದು ಗುರುತಿಸಲಾಗಿದೆ.

ಸಂಕಪ್ಪ ಅವರ ಪತ್ನಿ ಸುನೀತಾ ಹಾಗೂ ಮಗ ನೀರಕಟ್ಟೆಯಲ್ಲಿ ವಾಸವಾಗಿದ್ದು ಸಂಕಪ್ಪ ಅವರು ಪಾಂಡಿಕಟ್ಟೆಯಲ್ಲಿ ತಾಯಿಯೊಂದಿಗೆ ವಾಸವಿದ್ದರು. ಸಂಕಪ್ಪ ಅವರು ಆಗಾಗ ಪತ್ನಿ ಮನೆಗೆ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದು ಅನ್ನೋನ್ಯತೆಯಿಂದ ಇದ್ದರು. ಎ.8ರಂದು ನೀರಕಟ್ಟೆಗೆ ಬಂದವರು ಅಲ್ಲಿಯೇ ಕೆಲಸ ಮಾಡಿ ಉಳಿದುಕೊಂಡಿದ್ದರು.

ಎ. 18ರಂದು ಮಧ್ಯಾಹ್ನ 12.30ಕ್ಕೆ ಮನೆಯಲ್ಲಿ ಬುಟ್ಟಿ ಹೆಣೆಯುವ ಕೆಲಸ ಮಾಡಿಕೊಂಡಿದ್ದವರು ಊಟ ಮಾಡುತ್ತಿರುವಾಗ ಹಠಾತನ ಸೈಡಿಗೆ ಬಿದ್ದವರನ್ನು ಪತ್ನಿ ಉಪಚರಿಸಿ ಅಕ್ಕಪಕ್ಕದ ಮನೆಯವರ ಸಹಕಾರ ಪಡೆದು ಅಂಬ್ಯುಲೆನ್ಸ್‌ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿಯ ವೈದ್ಯರು ಪರೀಕ್ಷಿಸಿ ಸಂಕಪ್ಪ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸಂಕಪ್ಪ ಅವರು ಹೃದಯಾಘಾತದಿಂದ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿ ಅವರ ಪತ್ನಿ ಸುನೀತಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Related news

error: Content is protected !!