ಪ್ರಯಾಣಿಕನೊರ್ವ ಸಾರಿಗೆ ಸಂಸ್ಥೆ ಬಸ್ಸಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಕೆ.ಆರ್.ನಗರದ ಹಣ್ಣಿನ ವ್ಯಾಪಾರಿ ಮುಹಮ್ಮದ್ ರಿಯಾಜ್ (50) ಎಂದು ಗುರುತಿಸಲಾಗಿದೆ.
ಇವರು ಕೆ.ಆರ್.ನಗರದಿಂದ ಹುಣಸೂರು ಡಿಪೋಗೆ ಸೇರಿದ ಬಸ್ನಲ್ಲಿ ಪಿರಿಯಾಪಟ್ಟಣದ ಹತ್ತಿ ಮನೆಗೆ ತೆರಳಲು ಹುಣಸೂರಿಗೆ ಬರುತ್ತಿದ್ದರು.ಪ್ರಯಾಣಿಕರೆಲ್ಲಾ ಇಳಿದರೂ ಸಹ ಇವರು ಇಳಿಯದ್ದನ್ನು ಕಂಡ ಕಂಡಕ್ಟರ್ ದಿನೇಶ್, ಚಾಲಕ ರಾಜೇಶ್ ಎಬ್ಬಿಸಲು ಹೋಗಿದ್ದಾರೆ. ಪ್ರತಿಕ್ರಿಯೆ ಸಿಗದಿದ್ದಾಗ, ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಎ.ಎಸ್.ಐ.ರಮೇಶ್ ಪ್ರಕರಣ ದಾಖಲಿಸಿ, ವಿಳಾಸ ಪತ್ತೆ ಹಚ್ಚಿ ಪಿರಿಯಾಪಟ್ಟಣ ತಾಲೂಕಿನ ಅಂಕನಹಳ್ಳಿಯಲ್ಲಿದ್ದ ಮೃತರ ಪತ್ನಿ ರೇಷ್ಮಾಬಾನುರಿಗೆ ಮಾಹಿತಿ ನೀಡಿದ ಮೇರೆಗೆ ಕುಟುಂಬದವರು ಆಗಮಿಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಶವವನ್ನು ಒಪ್ಪಿಸಲಾಯಿತು.