- Advertisement -
- Advertisement -



ಕಾಸರಗೋಡು: ಮೂರು ತಿಂಗಳ ಗರ್ಭಿಣಿಯೋರ್ವಳು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಯ್ಯಾರ್ ಕನ್ನಟಿಪಾರೆ ಶಾಂತಿಯೋಡು ಎಂಬಲ್ಲಿ ನಡೆದಿದೆ.
ಶಾಂತಿಯೋಡು ನಿವಾಸಿ ವಿಜೇತ (32) ಮೃತಪಟ್ಟವರು.
ವಿಜೇತರವರ ಪತಿ ಜನಾರ್ಧನ ಅವರು ರವಿವಾರ ಬೆಳಿಗ್ಗೆ ಉಳ್ಳಾಲದ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಿಜೇತಾ ಮಾತ್ರ ಮನೆಯಲ್ಲಿದ್ದರು.
ಪತಿ ಸಂಜೆ ಮನೆಗೆ ಮರಳಿ ಬಂದಾಗ ಕೋಣೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಬಾಗಿಲು ಒಡೆದು ಗಮನಿಸಿದಾಗ ಫ್ಯಾನಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
- Advertisement -