Friday, May 3, 2024
spot_imgspot_img
spot_imgspot_img

ಕಡಬ: ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಸಂಬಂಧಿಕ

- Advertisement -G L Acharya panikkar
- Advertisement -

ಕಡಬ: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಸಂಬಂಧಿಕನೇ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಬಲ್ಪ ಗ್ರಾಮದಲ್ಲಿ ನಡೆದಿದೆ.

ರಮೇಶ್ ಕೆ (37) ಎಂಬವರು ಹಲ್ಲೆಗೊಳಗಾದವರು. ಆರೋಪಿಯನ್ನು ಸಂಬಂಧಿಯೇ ಆಗಿರುವ ಸುಂದರ ಹೊಸ್ಮಠ ಎಂದು ಗುರುತಿಸಲಾಗಿದೆ.
ರಮೇಶ ಅವರು ತನ್ನ ಹೆಂಡತಿ ಹಾಗೂ ಸಣ್ಣ ಮಗುವಿನೊಂದಿಗೆ ಮನೆಯಲ್ಲಿರುವ ವೇಳೆ ಮನೆಗೆ ಬಂದ ಆರೋಪಿ ಸುಂದರ ಹೊಸ್ಮಠ ಅವರು ಜೋರಾಗಿ ಮಾತನಾಡಲು ಆರಂಭಿಸಿದ್ದು, ಈ ಸಂದರ್ಭ ರಮೇಶ ಅವರು ಸಣ್ಣ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಕೋಪಗೊಂಡ ಆರೋಪಿ ಸುಂದರ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ರಮೇಶ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22 /2024 ಕಲಂ 324 ಐಪಿಸಿಯಂತೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!