Sunday, June 29, 2025
spot_imgspot_img
spot_imgspot_img

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯದವರಿಗೆ ಅವಕಾಶ ಕಲ್ಪಿಸಲು ಮನವಿ

- Advertisement -
- Advertisement -

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯದವರನ್ನು ಪರಿಗಣಿಸಲು ಮಲೆ ಕುಡಿಯರ ಸಂಘ ಸುಬ್ರಹ್ಮಣ್ಯ ವಲಯ ವತಿಯಿಂದ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಮನವಿ ಸಲ್ಲಿಸಿದೆ.

ಮಲೆಕುಡಿಯ ಜನಾಂಗದರಿಗೂ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಜಾತ್ರಾ ಮಹೋತ್ಸವದಲ್ಲಿ ಮೂಲ ಮೃತ್ತಿಕೆ ಮಲೆ ಕುಡಿಯ ಸಮುದಾಯದವರಿಗೆ ಮೊದಲು ಕೊಡುವ ಸಂಪ್ರದಾಯವಿದೆ. ಹೀಗೆ ಹಲವು ವಿಚಾರಗಳಿವೆ. ಈ ಹಿಂದಿನ ಸಂಪ್ರದಾಯದಂತೆ ಸಮಿತಿಯಲ್ಲಿ ಸುಬ್ರಹ್ಮಣ್ಯದ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರಿಗೆ ಸದಸ್ಯ ಸ್ಥಾನ ನೀಡಬೇಕು. ಆದರೆ ಪ್ರಸ್ತುತ ನೀಡದೆ ಕಡೆಗಣಿಸಿ ನಮ್ಮ ಸಮುದಾಯವನ್ನು ಕಡೆಗಣಿಸಿದಂತೆ ಕಂಡುಬರುತ್ತಿದೆ.

ಈ ಹಿಂದಿನ ಸರಕಾರಗಳ ಎಲ್ಲಾ ಅವಧಿಯಲ್ಲೂ ನಮ್ಮ ಸಮುದಾಯದ ವ್ಯಕ್ತಿಗಳಿಗೆ ಪ್ರಾಧಾನ್ಯತೆ ನೀಡುತ್ತಾ ಬರುತ್ತಿದ್ದು ಪ್ರಸ್ತುತ ಈ ಅವಧಿಯಲ್ಲಿ ಹಾಗೂ ಮುಂದಿನ ಎಲ್ಲಾ ಅವಧಿಯಲ್ಲಿ ನಮ್ಮ ಸಮುದಾಯವನ್ನು ಗಮನಿಸದೆ ಪ್ರಸ್ತಾಪನಾ ಸಮಿತಿ ರಚಿಸದಲ್ಲಿ ನಮ್ಮ ಸಮುದಾಯದ ಮೂಲ ಕೆಲಸಗಳಾದ ರಥ ಕಟ್ಟುವ ಕೆಲಸ ಸೇರಿದಂತೆ ಎಲ್ಲಾ ದೇವರ ಕೆಲಸಗಳನ್ನು ನಿಲ್ಲಿಸಿ ಪ್ರತಿಭಟಿಸುವುದಾಗಿ ಈ ಮೂಲಕ ಗಮನ ತರುವುದರೊಂದಿಗೆ ನಮ್ಮ ಮನವಿ ಮನಗಂಡು ನಮ್ಮ ಮಲೆಕುಡಿಯ ಸಮುದಾಯದ ವ್ಯಕ್ತಿಗೂ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡುವಂತೆ ಕೋರಲಾಗಿದೆ. ಅಲ್ಲದೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಮೂಲಕ ವಿನಂತಿಸಲಾಗಿದೆ ಎಂದು ತಿಳಿಸಲಾಗಿದೆ.

- Advertisement -

Related news

error: Content is protected !!