Sunday, June 29, 2025
spot_imgspot_img
spot_imgspot_img

ಕಾರವಾರ: ಮಲಗಿದ್ದ ಕಾರ್ಮಿಕನ ಮೇಲೆ ಮೀನು ತುಂಬಿದ ವಾಹನ ಹರಿದು ಮೃತ್ಯು

- Advertisement -
- Advertisement -

ಕಾರವಾರ: ಮಲಗಿದ್ದ ಕಾರ್ಮಿಕನ ಮೇಲೆ ಮೀನು ತುಂಬಿದ ವಾಹನ ಹರಿದು ಸ್ಥಳದಲ್ಲೇ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್‌ನಲ್ಲಿ ನಡೆದಿದೆ.

ಮೃತ ಕಾರ್ಮಿಕನನ್ನು ಹಾವೇರಿ ಮೂಲದ ಹನುಮಂತ್ ವಡ್ಡರ್ (27) ಎಂದು ಗುರುತಿಸಲಾಗಿದೆ.

ಕಾರವಾರದ ಬೈತಕೋಲ್‌ನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.ಮುಂದಿನ ತಿಂಗಳು ಕಾರ್ಮಿಕನ ಮದುವೆ ಕೂಡ ನಿಶ್ಚಯವಾಗಿತ್ತು.

ಬುಧವಾರ ಕೊಪ್ಪಳದ ಐದು ಜನ ಸ್ನೇಹಿತರೊಂದಿಗೆ ಕೆಲಸ ಮುಗಿಸಿ ಬಂದರಿನಲ್ಲಿ ಮಲಗಿದ್ದ.ಗುರುವಾರ ಮುಂಜಾನೆ ಮೀನು ತುಂಬಿಕೊಂಡಿದ್ದ ಬುಲೆರೋ ವಾಹನ ಹೊರಡುವ ಸಮಯದಲ್ಲಿ ಚಾಲಕ ಈ ಕಾರ್ಮಿಕ ಮಲಗಿರುವುದನ್ನು ಗಮನಿಸದೇ ವಾಹನ ಚಲಾಯಿಸಿದ್ದು, ಈತನ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!