Thursday, May 2, 2024
spot_imgspot_img
spot_imgspot_img

ಮಂಗಳ ಮುಖಿಯರ ಸಹವಾಸದಿಂದ ಗಂಡ, 3 ಮಕ್ಕಳನ್ನು ತೊರೆದು ಲಿಂಗ ಪರಿವರ್ತನೆಗೆ ಮುಂದಾದ ಪತ್ನಿ; ಠಾಣಾ ಮೆಟ್ಟಿಲೇರಿದ ಪತಿ

- Advertisement -G L Acharya panikkar
- Advertisement -

ಮಂಗಳಮುಖಿಯರ ಸಹವಾಸ ಮಾಡಿದ ಮಹಿಳೆ ಮೂವರು ಮಕ್ಕಳು ಹಾಗೂ ಗಂಡನನ್ನು ತೊರೆಯಲು ಮುಂದಾದ ಘಟನೆ ಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೂಲತಃ ದಂಪತಿಗಳು ವಿಜಯಪುರ ಜಿಲ್ಲೆಯ ರಾಣೇಬೆನ್ನೂರಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಮಹಿಳೆಗೆ ಮಂಗಳಮುಖಿಯರ ಪರಿಚಯ ಆಗಿದೆ. ಹೀಗಾಗಿ 2 ತಿಂಗಳ ಹಿಂದೆ 3 ಮಕ್ಕಳ ತಾಯಿ ಮಂಗಳಮುಖಿಯರೊಂದಿಗೆ ಹೋಗಿದ್ದಾಳೆ. ಈ ವಿಚಾರವಾಗಿ ಗಂಡ ಮಂಗಳ ಮುಖಿಯರ ಸಹವಾಸದಿಂದ ಮನ ಪರಿವರ್ತನೆಗೊಂಡು ತೆರಳಿದ್ದ ನನ್ನ ಪತ್ನಿಯನ್ನು ಹುಡುಕಿಕೊಡಿ ಎಂದುರಾಣೇಬೆನ್ನೂರು ಗ್ರಾಮೀಣ ಪೊಲೀಸ್​ ಠಾಣಾ ಮೆಟ್ಟಿಲೇರಿ ಮಂಗಳಮುಖಿಯರ ಮೇಲೆ ದೂರು ನೀಡಿದ್ದಾನೆ.

ಮಹಿಳೆ ಮಂಗಳಮುಖಿಯರ ಸಹವಾಸದಿಂದ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿದ ಪತ್ನಿಗೆ ಗಂಡ ಯಮನಪ್ಪ ಅನುಮತಿ ನೀಡಿಲ್ಲ. ಈ ಕಾರಣದಿಂದ ಸಿಡಿದೆದ್ದ ಪತ್ನಿ ಪತಿ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ.

ಸದ್ಯ ಈ ಘಟನೆ ಪೋಲಿಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಇದು ಗಂಡ-ಹೆಂಡತಿಯ ವಿಚಿತ್ರವಾದ ಸಾಂಸಾರಿಕ ವಿಷಯವಾಗಿದ್ದು, ಸಾಂತ್ವನ ಕೇಂದ್ರದಲ್ಲಿ ಈ ಸಮಸ್ಯೆ ಬಗೆಹರಿಸುವಂತೆ ಪೋಲಿಸರು ಸಲಹೆ ನೀಡಿದ್ದಾರೆ.

ಹೀಗಾಗಿ ನಗರದ ಸಾಂತ್ವಾನ ಕೇಂದ್ರದಲ್ಲಿ ಸಂಧಾನ ನಡೆದಿದ್ದು, ಮೂರು ಮಕ್ಕಳ ತಾಯಿ ಮಾತ್ರ ಪತಿ ಯಮನಪ್ಪ ಜೊತೆ ಹೋಗಲು ಹಿಂದೇಟು ಹಾಕಿದ್ದಾಳೆ.

- Advertisement -

Related news

error: Content is protected !!