- Advertisement -
- Advertisement -
ಬಂಟ್ವಾಳ ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಸ್ತೆ ಬದಿಯಲ್ಲಿ ತಾಯಿ ಮಗಳು ನಡೆದುಕೊಂಡು ಹೋಗುತ್ತಿರುವಾಗ ಅತೀ ವೇಗದಿಂದ ನಿರ್ಲಕ್ಷ್ಯದ ಚಾಲನೆ ಮಾಡಿ ಯುವತಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಮನೆ ಕಾಂಪೌಂಡಿಗೆ ಡಿಕ್ಕಿ ಹೊಡೆದು ತಂತಿ ಕಂಬಕ್ಕೂ ಗುದ್ದಿ ಮದುವೆ ನಿಶ್ಚಯವಾಗಿದ್ದ 22ವರ್ಷದ ಚೈತ್ರ ಎಂಬ ಯವತಿಯನ್ನು ಬಲಿತೆಗೆದುಕೊಂಡಿದ್ದು ವಾಹನದಲ್ಲಿದ್ದ ಚಾಲಕ ಸಹಿತ ಸಹಪ್ರಯಾಣ ಮಾಡುತ್ತಿದ್ದ ಎಲ್ಲರೂ ಸ್ಥಳದಿಂದ ಅಪಘಾತವಾದ ಕೂಡಲೇ ಕಾಲ್ಕಿತ್ತಿದ್ದು ಇದೊಂದು ಗಾಂಜಾ ವ್ಯಸನಿಗಳ ತಂಡವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರೆ.
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪರಿಸರದಲ್ಲಿ ಸರಣಿ ಕಳ್ಳತನ ಮಾಸುವ ಮುನ್ನವೇ ಗಾಂಜಾದ ಅಮಲು ಬಂಟ್ವಾಳ ತಾಲೂಕಿನಲ್ಲಿ ಘಮಘಮಿಸುತಿದ್ದು ಜನತೆಯನ್ನು ಭಯ ಭೀತರನ್ನಾಗಿಸಿದ್ದು ಈ ಎಲ್ಲಾ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ತೀವ್ರವಾಗಿ ಖಂಡಿಸುತ್ತದೆ. ಮತ್ತು ಸರಣಿ ಕಳ್ಳತನ ಮತ್ತು ಗಾಂಜಾ ತಂಡಗಳನ್ನು ಪೋಲೀಸ್ ಇಲಾಖೆ ಜಿಲ್ಲಾಡಳಿತ ಬಂಧಿಸಿ ಸದೆಬಡಿಯಬೇಕಾಗಿ ಆಗ್ರಹಿಸುತ್ತದೆ.
- Advertisement -