- Advertisement -
- Advertisement -






ಸಾಲೆತ್ತೂರು: ಸಾಲೆತ್ತೂರು ಸಮೀಪ ಕುಡಿದ ಅಮಲಿನಲ್ಲಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ಪಲ್ಟಿಯಾದ ಘಟನೆ ವರದಿಯಾಗಿದೆ.ಕುತ್ತಾರು ಸಮೀಪ ನಡೆದಿದ್ದ ಕಾರ್ಯಕ್ರಮಕ್ಕೆ ಈಶ್ವರಮಂಗಲ ಸಮೀಪದ ಪಡುಮಲೆ ಪರಿಸರದ ನಿವಾಸಿಗಳು ಸ್ವಿಫ್ಟ್ ಕಾರ್ ನಲ್ಲಿ ತೆರಳಿ ವಾಪಾಸ್ಸಾಗುವಾಗ ಮದ್ಯದ ನಶೆಯಲ್ಲಿದ್ದ ಕಾರು ಚಾಲಕನಿಂದ ಸಾಲೆತ್ತೂರು ಪಾಲ್ತಾಜೆ ಬಳಿ ಕಾರು ಅಪಘಾತಕ್ಕೀಡಾಗಿದೆ.
ಚಾಲಕನು ಮದ್ಯ ಸೇವನೆ ಮಾಡಿರುವುದನ್ನು ಗಮನಿಸಿ ಮಹಿಳೆಯು ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಪಾಲ್ತಾಜೆ ಬಳಿ ಕಾರು ಅಪಘಾತದ ದೃಶ್ಯ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಮಹಿಳೆಯು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರಲ್ಲಿ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
- Advertisement -