Wednesday, July 3, 2024
spot_imgspot_img
spot_imgspot_img

ಮಣಿಪಾಲ: ವಾಹನ ತಪಾಸಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಸ್ಕೂಟರ್ ಡಿಕ್ಕಿ

- Advertisement -G L Acharya panikkar
- Advertisement -

ಮಣಿಪಾಲ: ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಅತಿವೇಗದಲ್ಲಿ ಬಂದ ಸ್ಕೂಟರ್ ಡಿಕ್ಕಿಯಾಗಿರುವ ಘಟನೆ ನಡೆದಿದೆ.

ಮಣಿಪಾಲ ಠಾಣೆಯ ತಿಮ್ಮಯ್ಯ ಮತ್ತು ಆನಂದಯ್ಯ ಅವರು ಮಣಿಪಾಲದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.ರವಿವಾರ ಮುಂಜಾನೆ ಸಿಂಡಿಕೇಟ್ ಸರ್ಕಲ್ ಕಡೆಯಿಂದ ಉಪೇಂದ್ರ ಪೈ ಸರ್ಕಲ್ ಕಡೆಗೆ ಹೋಗುವ ವಿ.ಎಸ್. ಆಚಾರ್ಯ ರಸ್ತೆಯಲ್ಲಿ ತಿಮ್ಮಯ್ಯ ಮತ್ತು ಆನಂದಯ್ಯ ಅವರು ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಚೇತನ್ ಎಂಬವರು ತನ್ನ ಸ್ಕೂಟರ್‌ನಲ್ಲಿ ಅಭಿಷೇಕ್ ಅವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತಿವೇಗದಲ್ಲಿ ಬಂದಿದ್ದು, ನಿಲ್ಲಿಸುವಂತೆ ಸೂಚಿಸಿದರೂ ನಿರ್ಲಕ್ಷಿಸಿ ತಿಮ್ಮಯ್ಯ ಅವರಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ತಿಮ್ಮಯ್ಯ ಸಹಿತ ಸ್ಕೂಟರ್ ಸವಾರರಿಬ್ಬರೂ ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!