




ಪುತ್ತೂರು : ದ್ವಿಚಕ್ರ ವಾಹನವೊಂದು ರಸ್ತೆ ಬದಿ ನಿಂತಿದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರು ತಾಲೂಕು, ಕೋಡಿಂಬಾಡಿ ಗ್ರಾಮದ, ಕೋಡಿಂಬಾಡಿ ಸಿಂಗಾರ ಮಂಟಪ ಎಂಬಲ್ಲಿ ನಡೆದಿದೆ.
ದಿನಾಂಕ 28-10-2024 ರಂದು ಬೆಳಿಗ್ಗೆ, ದ್ವಿಚಕ್ರ ವಾಹನ (KA-21-EE-4297 ) ಸವಾರ ರೌಶೀನ್ ಎಂಬವರು ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಹರಿಯಪ್ಪ ನಾಯ್ಕ್ ಎಂಬವರಿಗೆ ಹಿಂಬದಿಯಿಂದ ಡಿಕ್ಕಿಯಾಗಿರುತ್ತದೆ. ಅಪಘಾತದಲ್ಲಿ ಹರಿಯಪ್ಪ ನಾಯ್ಕ್ ಮತ್ತು ದ್ವಿಚಕ್ರ ವಾಹನ ಸವಾರ ರೌಶೀನ್ ರಸ್ತೆಯಲ್ಲಿ ಬಿದ್ದು ಹರಿಯಪ್ಪ ನಾಯ್ಕ್ ರವರಿಗೆ ಗಾಯಗಳಾಗಿದ್ದು, ಗಾಯಾಳು ಹರಿಯಪ್ಪ ನಾಯ್ಕ್ ರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಹಾಗೂ ರೌಶೀನ್ ನಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 118/2024 ಕಲಂ: 281, 125(a) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.