Friday, May 17, 2024
spot_imgspot_img
spot_imgspot_img

ಆ್ಯಂಬುಲೆನ್ಸ್‌ ಬಸ್ ನಡುವೆ ಅಪಘಾತ; ಓರ್ವ ಮೃತ್ಯು..!

- Advertisement -G L Acharya panikkar
- Advertisement -

ಆ್ಯಂಬುಲೆನ್ಸ್‌ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಅಪಘಾತದ ಪರಿಣಾಮ ಗಾಯಳು ಸಾವನ್ನಪ್ಪಿದ ಘಟನೆ ತುಮಕೂರು ನಗರದ ಬಿ.ಜಿ.ಎಸ್ ವೃತ್ತದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಶಿರಾ ತಾಲೂಕಿನ ಗೋಪಿಕುಂಟೆ ಗ್ರಾಮದ ರಾಜಣ್ಣ ಎಂದು ಗುರುತಿಸಲಾಗಿದೆ.

ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಶಿರಾ ತಾಲೂಕಿನ ಗೋಪಿಕುಂಟೆ ಗ್ರಾಮದ ರಾಜಣ್ಣ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ. ಕೆಎಸ್ ಆರ್ ಟಿ ಸಿ ಬಸ್ ಹೊಸದುರ್ಗ ಕಡೆ ಹೋಗುತಿತ್ತು. ಆ್ಯಂಬುಲೆನ್ಸ್​ ಬೆಂಗಳೂರು ಕಡೆ ಹೋಗುತ್ತಿತ್ತು. ಆದರೆ ಆ್ಯಂಬುಲೆನ್ಸ್ ಗೆ ಗುದ್ದಿದ ಪರಿಣಾಮ ಗಾಯಾಳು ರಾಜಣ್ಣ ಸಾವಿಗೀಡಾಗಿದ್ದಾನೆ.

ರಾಜಣ್ಣ ಗೋಪಿಕುಂಟೆ ಗ್ರಾಮದಲ್ಲಿ ಮನೆ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು, ಹೆಚ್ಚಿನ ಚಿಕಿತ್ಸೆ ಗಾಗಿ ತುಮಕೂರಿನಿಂದ ಬೆಂಗಳೂರಿಗೆ ಸಾಗಿಸುವಾಗ ಆ್ಯಂಬುಲೆನ್ಸ್​ ಅಪಘಾತಕ್ಕೀಡಾಗಿದೆ. ಈ ವೇಳೆ ಚಾಲಕ ರೆಹಮಾನ್ ಪಾಷ, ಸಂಬಂಧಿ ಹನುಮಂತರಾಪ್ಪ ಗಾಯಗೊಂಡಿದ್ದಾರೆ. ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!