ವಿಟ್ಲ: ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಓರ್ವ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು, ಕೋಲ್ನಾಡು ಗ್ರಾಮದ, ಖಂಡಿಗ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಅಬೂಬಕ್ಕರ್ ಮದನಿ (KA-19-HQ-4208 ನೇ ಸ್ಕೂಟರ್ ಸವಾರ) ಎಂದು ಗುರುತಿಸಲಾಗಿದೆ.
ದಿನಾಂಕ: 27.03.2024 ರಂದು ಬೆಳಿಗ್ಗೆ, ಬಂಟ್ವಾಳ ತಾಲೂಕು, ಕೋಲ್ನಾಡು ಗ್ರಾಮದ, ಖಂಡಿಗ ಎಂಬಲ್ಲಿ, ಅಬೂಬಕ್ಕರ್ ಮದನಿ ಎಂಬವರು KA-19-HQ-4208 ನೇ ಸ್ಕೂಟರನಲ್ಲಿ ಬರುತ್ತಿದ್ದಾಗ, KA-19-HM-8157 ನೇ ಸ್ಕೂಟರ್ ಸವಾರ ಇಲ್ಯಾಸ್ ರವರು, ಸಹಸವಾರನಾಗಿ ಅಬ್ದುಲ್ ಮುತ್ತಲಿಬ್ ಎಂಬವರನ್ನು ಕುಳ್ಳಿರಿಸಿಕೊಂಡು, ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಕಾರಣ, ಅಬೂಬಕ್ಕರ್ ಮದನಿಯವರ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ, ಅಬೂಬಕ್ಕರ್ ಮದನಿಯವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಸ್ಥಳದಲ್ಲಿದ್ದ ಕೋಲ್ನಾಡು ಗ್ರಾಮ, ಬಂಟ್ವಾಳ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಹಾಗೂ ಇತರರು ಗಾಯಾಳುವನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 53/2024 ಕಲಂ: 279,337 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.