Monday, June 30, 2025
spot_imgspot_img
spot_imgspot_img

ಯುವತಿಯ ಎದೆ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್‌..!

- Advertisement -
- Advertisement -

ನೆಲಮಂಗಲ: ಜಿ.ಎನ್.ಎಮ್ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿಯ ಎದೆಯ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕಲ್ಬುರ್ಗಿಯ ಜೇವರ್ಗಿ ಮೂಲದ ಬಸವರಾಜು (28) ಎಂದು ಗುರುತಿಸಲಾಗಿದೆ.

21 ವರ್ಷದ ಯುವತಿ ನರ್ಸಿಂಗ್ ಓದಲು ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾಳೆ. 8ನೇ ಮೈಲಿಯ ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಬಸವರಾಜ್ ಚಿಕ್ಕಬಾಣಾವಾರದ ಮಾರುತಿನಗರದಲ್ಲಿ ವಾಸವಾಗಿದ್ದಾನೆ. ಜುಲೈ 30 ರಂದು ವಿದ್ಯಾರ್ಥಿನಿ ರಾತ್ರಿ 9 ಗಂಟೆ ಸುಮಾರಿಗೆ ಸಪ್ತಗಿರಿ ಕಾಲೇಜ್ ಬಳಿಯ ಫುಟ್ ಪಾತ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದಳು.

ಈ ವೇಳೆ ಪಲ್ಸರ್ ಬೈಕ್ ಮೇಲೆ ಬಂದ ಆರೋಪಿ ಬಸವರಾಜ್​ ವಿದ್ಯಾರ್ಥಿನಿಯ ಎದೆ ಭಾಗವನ್ನು ಮುಟ್ಟಿದ್ದಾನೆ. ವಿದ್ಯಾರ್ಥಿನಿ ಜೋರಾಗಿ ಚೀರುತ್ತಿದ್ದಂತೆ ಆರೋಪಿ ಬಸವರಾಜ್​ ಪರಾರಿಯಾಗಿದ್ದಾನೆ. ಬಳಿಕ ವಿದ್ಯಾರ್ಥಿ ಸೋಲದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಇನ್ಸ್‌ಪೆಕ್ಟರ್ ಹರಿಯಪ್ಪ ಮಾರ್ಗದರ್ಶನದಲ್ಲಿ ಫೀಲ್ಡ್​​ಗೆ ಇಳಿದ ಪಿಎಸ್ಐ ಧನುಷ್ ಮತ್ತು ಕೃಪಾಲ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

Related news

error: Content is protected !!