- Advertisement -
- Advertisement -






ಗಾಜಿಯಾಬಾದ್ನ ಹಿಂಡನ್ ಏರ್ಪೋಟಿ್ರಂದ ಕೋಲ್ಕತ್ತಾಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದಕ್ಕೆ ಟೇಕಾಫ್ ಆಗಲಿಲ್ಲ ಎಂದು ವರದಿಯಾಗಿದೆ.ವಿಮಾನವು ಟೇಕಾಫ ಸಿದ್ಧತೆ ನಡೆಸುತ್ತಿದ್ದಾಗ ಹಠಾತ್ ತಾಂತ್ರಿಕ ದೋಷ ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಟೇಕಾಫ್ ಮುಂದೂಡಲಾಯಿತು.ಏರ್ ಇಂಡಿಯಾ ವಿಮಾನದ ಸಮಸ್ಯೆ ಬಗೆಹರಿಸುತ್ತಿರೋದ್ರಿಂದ ವಿಮಾನವು ಸುಮಾರು ಒಂದು ಗಂಟೆ ರನ್ವೇಯಲ್ಲಿ ನಿಂತಿದೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಪತನವು ಇಡೀ ಜಗತ್ತನ್ನೇ ಮರಗುವಂತೆ ಮಾಡಿದ್ದು ಗೊತ್ತೇ ಇದೆ.
- Advertisement -








