ಪುಣಚ: ಪರಿಯಾಲ್ತಡ್ಕ ಜುಮಾ ಮಸೀದಿಯ ಅಧೀನದಲ್ಲಿರುವ ಅಜ್ಜಿನಡ್ಕ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ಇರುವ ಬ್ಯಾರಿಕೇಡ್ ಹಾಗೂ ಮಸೀದಿ ಗೇಟಿಗೆ ನಿನ್ನೆ ತಡರಾತ್ರಿ ಸಮಯ 11:40 ರ ಸಮಯದಲ್ಲಿ ಕೀಡಿಗೇಡಿಗಳು ಹಾನಿ ಮಾಡಿ ಪರಾರಿಯಾದ ಘಟನೆ ವರದಿಯಾಗಿದೆ.
ಮಸೀದಿಯ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಜಮಾಅತ್ ಕಮಿಟಿಯ ಅಧ್ಯಕ್ಷರು ಆಗಿರುವ ಎಂ.ಎಸ್ ಮಹಮ್ಮದ್ ಅವರ ಗಮನಕ್ಕೆ ಘಟನೆಯ ವಿಚಾರವನ್ನು ತಂದಿದ್ದು ಕೂಡಲೇ ಎಂ.ಎಸ್ ಮಹಮ್ಮದ್ ಅವರು ವಿಟ್ಲ ಪೋಲಿಸ್ ಠಾಣೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರನ್ನು ಆದರಿಸಿ ವಿಟ್ಲ ಠಾಣೆಯ ಎಎಸ್ ಐ ಕರುಣಾಕಾರ, ಪಿಎಸ್ ಐ ಕೃಷ್ಣ , ಸಿಬ್ಬಂದಿಗಳಾದ ವಿನಾಯಕ, ಮಧು ಅವರು ಸ್ಥಳಕ್ಕೆ ಭೇಟಿ ನೀಡಿ ಮಸೀದಿಯಲ್ಲಿ ಆಗಿರುವ ಹಾನಿಯ ಬಗ್ಗೆ ವರದಿ ಪಡೆದು ಸಿಸಿ ಕ್ಯಾಮರಾ ಪುಟೇಜ್ ಪರೀಶಿಲನೆ ನಡೆಸಿದರು.
ಪರಿಯಾಲ್ತಡ್ಕ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಎಂ.ಎಸ್ ಮಹಮ್ಮದ್ ಅವರಿಂದ ಪೋಲಿಸ್ ಅಧಿಕಾರಿಗಳು ಮಾಹಿತಿ ಪಡೆದರು. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಕ್ರಮ ಜರುಗಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಮಾಅತ್ ಕಮಿಟಿಯ ಕಾರ್ಯದರ್ಶಿ ಮಹಮ್ಮದ್ ಬಿಕಾಂ, ಜೊತೆ ಕಾರ್ಯದರ್ಶಿ ಬದ್ರುದ್ದೀನ್ ಪೈಸಾರಿ, ಸಿರಾಜ್ ಮಣಿಲ, ಶಾಪಿ ಮಾಳಿಗೆ, ಜಮಾಅತ್ ಸದಸ್ಯರಾದ ಕಮರುದ್ದೀನ್ ಪರಿಯಾಲ್, ಬಿಲಾಲ್ ಮಸೀದಿಯ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ, ಸುಲೈಮಾನ್ ಅಜ್ಜಿನಡ್ಕ, ಉಪಸ್ಥಿತರಿದ್ದರು.