- Advertisement -
- Advertisement -
ಬೆಂಗಳೂರು (ಅ.22): ಭಾರತೀಯ ಜನತಾ ಪಾರ್ಟಿಯ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಯುವ ತೇಜಸ್ಸು ಫೈರ್ ಬ್ರಾಂಡ್ ನಾಯಕ ತೇಜಸ್ವಿ ಸೂರ್ಯ ಅವರನ್ನು ವಿಟ್ಲ ಪ್ರಖಂಡ ದ ಭಜರಂಗದಳದ ಮಾಜಿ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ರವರ ನೇತೃತ್ವದಲ್ಲಿ ಭೇಟಿಯಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ರವರೊಂದಿಗೆ ಮಾತನಾಡಿದ ಅಕ್ಷಯ್ ರವರು ಹಿಂದೂ ಯುವಕರ ಪರ ಕಾನೂನು ವ್ಯವಸ್ಥೆಗೆ ಸಹಕಾರ ನೀಡುವಂತೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಆರ್. ಎಸ್.ಎಸ್ ಜವಾಬ್ದಾರಿ ಹೊಂದಿರುವ ಮಂಜುನಾಥ್ ಹಾಗೂ ಅಶ್ವಥ್ ಆಚಾರ್ಯ, ಜಯೇಶ್ ವಿಟ್ಲ , ರಾಜೇಂದ್ರ ಪ್ರಸಾದ್, ಜೀತನ್ ರೈ, ರೋಹನ್ ಗೌಡ, ದೀಕ್ಷಿತ್ ಪಾಟಾಳಿ, ಎಸ್. ಮುರಳಿ ಮಹಾಲಕ್ಷ್ಮಿ ನಗರ್ ಬೆಂಗಳೂರು ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -