




ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂಡಳಿ (ರಿ.) ಅಶೋಕನಗರ -ಅಳಕೆಮಜಲು 42ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವದ ಸಭಾ ಕಾರ್ಯಕ್ರಮವು ಜಗದೀಶ್ ಪೂಜಾರಿ ಅಳಕೆಮಜಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇದರ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ಧಾರ್ಮಿಕ ಉಪನ್ಯಾಸ ನೀಡಿ ” ನಮ್ಮ ಸಮಾಜದ ದೇವಸ್ಥಾನ ಮತ್ತು ಧಾರ್ಮಿಕ ಆಚರಣೆಗಳನ್ನು ಮಾಡಿಕೊಂಡು ಸಮಾಜದಲ್ಲಿ ನಾವೆಲ್ಲರೂ ಒಂದಾಗಿ ಸನಾತನ ಧರ್ಮವನ್ನು ಉಳಿಸಿ- ಬೆಳೆಸುವ ಕೆಲಸವನ್ನು ಮಾಡಬೇಕು” ಎಂದು ಹೇಳಿದರು. ರಾಜರಾಮ್ ಶೆಟ್ಟಿ ಕೊಲ್ಪೆಗುತ್ತು ಪ್ರಸ್ತಾವಿಕ ಮಾತನಾಡಿದರು.


ಕಾರ್ಯಕ್ರಮದಲ್ಲಿ ಚರಣ್ ಕಜೆ ದಂತ ಚಿಕಿತ್ಸಾಲಯ ವಿಟ್ಲ, ರಜಿತ್ ಆಳ್ವ ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ರಾಜರಾಮ್ ಶೆಟ್ಟಿ ಕೊಲ್ಪೆಗುತ್ತು, ಭಜನಾ ಮಂಡಳಿ ಉಪಾಧ್ಯಕ್ಷ ಭಾಸ್ಕರ ರೈ, ಮಹಿಳಾ ಅಧ್ಯಕ್ಷೆ ಗೀತಾ ನಾಯ್ಕ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ಯಾಮ್ ಕಿರಣ್, ಹಾಗೂ ಲಿಷಿಕಾ ಪ್ರಾರ್ಥಿಸಿ, ಚಿದಾನಂದ ಗೌಡ ಪೆಲತ್ತಿಂಜ ಸ್ವಾಗತಿಸಿದರು. ಕೃಷ್ಣ ಕಿಶೋರ್ ಭಟ್ ವಂದಿಸಿ, ಸುಧಿರ್ ನಾಯ್ಕ, ಉದಯ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಕಲಾ ತಂಡ ಪುಗರ್ತೆ ಕಲಾವಿದೆರ್ ವಿಟ್ಲ ಮೈರ ಇವರಿಂದ “ಕಾಂಚನ” ನಾಟಕ ಬಹಳ ಅದ್ದೂರಿಯಾಗಿ ನಡೆಯಿತು.