Friday, May 23, 2025
spot_imgspot_img
spot_imgspot_img

ಅಳಿಕೆ: ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರ ಸಾರಥ್ಯದ ನಡೆದ ಯಶಸ್ವಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಹಲವು ಗಣ್ಯರು ಭಾಗಿ

- Advertisement -
- Advertisement -

65 ಕೆ ಜಿ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಎಟ್ಯಾಕರ್ಸ್ ವಿಟ್ಲ ಪ್ರಥಮ ಸ್ಥಾನ

ಯುನೈಟೆಡ್ ಪಿಲಿಬೈಲು ದ್ವಿತೀಯ ಸ್ಥಾನ ಹಾಗೂ ಶ್ರೀದೇವಿ ಅರೆಬೆಟ್ಟು ತೃತೀಯ ಸ್ಥಾನ

ಅಳಿಕೆ: ರಾಜೀವ್‌ ಗಾಂಧಿ ಯುವ ಶಕ್ತಿ ಸಂಘ (ರಿ) ಅಳಿಕೆ ಆಶ್ರಯದಲ್ಲಿ ದ ಕ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಹಾಗೂ ಬಂಟ್ವಾಳ ತಾಲೂಕು ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಅಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರ ಸಾರಥ್ಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಅಳಿಕೆ ಸಣ್ಣಗುತ್ತು ಕ್ರೀಡಾಂಗಣದಲ್ಲಿ ಏ. 26 ನೇ ಶನಿವಾರ ನಡೆಯಿತು.

ಸಂಜೆ ಉದ್ಘಾಟನಾ ಸಮಾರಂಭ ನಡೆಯಿತು. ಎರುಂಬು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರು ಬಾಲಕೃಷ್ಣ ಕಾರಂತ ಎರುಂಬು ಕ್ರೀಡಾಂಗಣ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಾರಾಯಣ ಪೂಜಾರಿ ಪಡಿಬಾಗಿಲು ಗೌರವ ಅಧ್ಯಕ್ಷರು ಸಣ್ಣಗುತ್ತು ಪಂಜುರ್ಲಿ, ಕಲ್ಲುರ್ಟಿ ದೈವಸ್ಥಾನ, ಸದಾಶಿವ ಶೆಟ್ಟಿ ಯಂ ಅಧ್ಯಕ್ಷರು ಒಡಿಯೂರು ಗ್ರಾಮ ವಿಕಾಸ ಯೋಜನೆ ಅಳಿಕೆ ಘಟ ಸಮಿತಿ, ರವೀಶ ಕೆ, ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ಒಕ್ಕೂಟ, ಉದಯ ಮುಳಿಯ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಳಿಯ ಒಕ್ಕೂಟ, ಶೇಕ್ ಅಲಿ ಚೆಂಡುಕುಳ ಅಧ್ಯಕ್ಷರು, ಬದ್ರಿಯಾ ಜುಮಾ ಮಸೀದಿ ಅಳಿಕೆ ಉಪಸ್ಥಿತರಿದ್ದರು.

ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷರು, ಅಳಿಕೆ ಗ್ರಾಮ ಪಂಚಾಯತ್ ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿ ರಮಾನಾಥ ರೈ ಮಾಜಿ ಸಚಿವರು ಕರ್ನಾಟಕ ಸರಕಾರ, ಪದ್ಮರಾಜ್ ಆರ್ ಪೂಜಾರಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು, ಎಂ. ಎಸ್ ಮಹಮ್ಮದ್ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು, ಕೆ.ಸಂಜೀವ ಪೂಜಾರಿ ಅಧ್ಯಕ್ಷರು, ದ.ಕ ಜಿಲ್ಲಾ ಮೂರ್ತೆಧಾರರ ಸೇವಾ ಸಹಕಾರಿ ಸಂಘ ಬೊಳ್ಳಾಯಿ, ಪಿ ಪೂವಪ್ಪ ಶೆಟ್ಟಿ ಅಳಿಕೆ ನಿವೃತ ಪ್ರಾಧ್ಯಾಪಕರು ಪದವಿ ಪೂರ್ವ ಕಾಲೇಜು ಅಳಿಕೆ, ಎಂ ಯಶೋಧರ ಬಂಗೇರ ನಿವೃತ ಮುಖ್ಯೋಪಾಧ್ಯಾಯರು ಶ್ರೀ ಸತ್ಯಸಾಯಿ ಲೋಕ ಸೇವಾ ಹಿ.ಪ್ರಾ. ಶಾಲೆ ಆಳಿಕೆ, ಸಂಜೀವ ಪೂಜಾರಿ ನಿಡ್ಯ, ಅಧ್ಯಕ್ಷರು ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘ (ನಿ) ವಿಟ್ಲ, ಸುಧಾಕರ ಪೂಜಾರಿ ಬಡಕ್ಕೋಡಿ ಉದ್ಯಮಿಗಳು & ಪ್ರಶಸ್ತಿ ಪುರಸ್ಕೃತ ಜೇನು ಕೃಷಿಕರು ಕೇಪು, ಜನಾರ್ಧನ ಪೂಜಾರಿ ಪದಡ್ಕ ಉದ್ಯಮಿಗಳು ಮಂಗಳೂರು, ಕೃಷ್ಣ ಎಂ ಅಳಿಕೆ ಪದ್ಮ ಅಸೋಸಿಯೇಟ್ಸ್ ತೆರಿಗೆ ಸಲಹೆಗಾರರು ಪುತ್ತೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಶ್ರೀಧರ ಬಾಳೆಕಲ್ಲು ಅಧ್ಯಕ್ಷರು ಮಾಣಿಲ ಗ್ರಾಮ ಪಂಚಾಯತ್, ಸೋಮಶೇಖರ ಪೂಜಾರಿ ಓಜಾಲ ಅಧ್ಯಕ್ಷರು, ಕೊಡಿಪ್ಪಾಡಿ ಗ್ರಾಮ ಪಂಚಾಯತ್, ಅಬ್ದುಲ್ ಕರೀಂ ಕುದ್ದುಪದವು ಸದಸ್ಯರು, ಕೇಪು ಗ್ರಾಮ ಪಂಚಾಯತ್, ರಮಾನಾಥ ವಿಟ್ಲ ಮಾಜಿ ಅಧ್ಯಕ್ಷರು, ವಿಟ್ಲ ಪಂಚಾಯತ್, ಸುಶಾಂತ್ ಶೆಟ್ಟಿ ಅಧ್ಯಕ್ಷರು, ವಲಯ ಕಾಂಗ್ರೆಸ್ ವಿಟ್ಲ ಮುಡ್ನೂರು, ವಿಷ್ಣುಕುಮಾರ್ ಕೊಮ್ಮುಂಜೆ ಅಧ್ಯಕ್ಷರು, ವಲಯ ಕಾಂಗ್ರೆಸ್ ಮಾಣಿಲ, ರಾಜೇಂದ್ರ ರೈ ದೈಹಿಕ ಶಿಕ್ಷಕರು ಆಳಿಕೆ ಸತ್ಯಸಾಯಿ ಲೋಕ ಸೇವಾ ಹಿರಿಯ ಪ್ರಾಥಮಿಕ ಶಾಲೆ, ದೇವದಾಸ ಅಡ್ಯನಡ್ಕ ಉದ್ಯಮಿಗಳು, ಶೈಲೇಶ್ ಕೆ. ಪೂಜಾರಿ ಅಧ್ಯಕ್ಷರು ಬಂಟ್ವಾಳ ತಾಲೂಕು ಗುತ್ತಿಗೆಗಾರರ ಸಂಘ, ಶ್ರೀಮತಿ ಸರೋಜಿನಿ ಉಪಾಧ್ಯಕ್ಷರು ಅಳಿಕೆ ಗ್ರಾಮ ಪಂಚಾಯತ್, ಸೀತಾರಾಮ ಶೆಟ್ಟಿ ಮುಳಿಯ ಸದಸ್ಯರು ಅಳಿಕೆ ಗ್ರಾಮ ಪಂಚಾಯತ್, ಜಗದೀಶ ಶೆಟ್ಟಿ ಮುಳಿಯ ಸದಸ್ಯರು ಅಳಿಕೆ ಗ್ರಾಮ ಪಂಚಾಯತ್, ಸುಕುಮಾ‌ರ್ ಮುಳಿಯ ಸದಸ್ಯರು ಅಳಿಕೆ ಗ್ರಾಮ ಪಂಚಾಯತ್, ಶ್ರೀಮತಿ ಬಬಿತ ಜೆಡ್ಡು ಸದಸ್ಯರು ಅಳಿಕೆ ಗ್ರಾಮ ಪಂಚಾಯತ್, ಶ್ರೀಮತಿ ಸೆಲ್ವಿನಾ ಡಿಸೋಜ ಸದಸ್ಯರು ಅಳಿಕೆ ಗ್ರಾಮ ಪಂಚಾಯತ್, ಶ್ರೀಮತಿ ಶಾಂಭವಿ ಸದಸ್ಯರು ಅಳಿಕೆ ಗ್ರಾಮ ಪಂಚಾಯತ್ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.

ರೂಪೇಶ್ ರೈ ಅಳಿಕೆ ಗುತ್ತು (ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಅಳಿಕೆ) ಇವರ ಅಧ್ಯಕ್ಷ ತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮೋಹನದಾಸ ರೈ ಗೌರವಾಧ್ಯಕ್ಷರು ದಿವ್ಯಜ್ಯೋತಿ ಮಿತ್ರ ವೃಂದ ಎರುಂಬು, ಶರತ್‌ಚಂದ್ರ ಮಡಿವಾಲ ಬಲ್ನಾಡು ಡೆಕ್ನೊ ಸರ್ವೀಸಸ್‌ ಪ್ರೈವೆಟ್‌ ಲಿಮಿಟೆಡ್‌, ಮೋನಪ್ಪ ಮೂಡೈಬೆಟ್ಟು ವಕೀಲರು ಪುತ್ತೂರು, ಕುಮಾರನಾಥ ಕೆ ವಕೀಲರು ಪುತ್ತೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಗ್ರಾಮಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀದೇವಿ ಅರೆಬೆಟ್ಟು ದ್ವಿತೀಯ ಸ್ಥಾನ ಪಡೆದ ಎಟ್ಯಾಕರ್ಸ್ ವಿಟ್ಲ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಹಾಗೂ 65 ಕೆ ಜಿ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಎಟಾಕರ್ಸ್ ವಿಟ್ಲ, ದ್ವಿತೀಯ ಸ್ಥಾನ ಪಡೆದ ಯುನೈಟೆಡ್ ಪಿಲಿಬೈಲು ಹಾಗೂ ತೃತೀಯ ಸ್ಥಾನ ಪಡೆದ ಶ್ರೀ ದೇವಿ ಅರೆಬೆಟ್ಟು ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಕಬಡ್ಡಿ ಪಂದ್ಯಾಟದ ಬೆಸ್ಟ್ ರೈಡರ್ ಅನಸ್ ಪಿಲಿಬೈಲು, ಬೆಸ್ಟ್ ಕ್ಯಾಚರ್ ಆದರ್ಶ್ ವಿಟ್ಲ, ಹಾಗೂ ಆಲ್ ರೌಂಡರ್ ಪ್ರಶಸ್ತಿ ಪಡೆದ ದೀಕ್ಷಿತ್ ವಿಟ್ಲ ಇವರನ್ನು ಬಹುಮಾನ ನೀಡಿ ಗೌರವಿಸಲಾಯಿತು.

ರಾಜಕೀಯ ಸೇವೆಯೊಂದಿಗೆ ಕ್ರೀಡೆ ಹಾಗೂ ಇನ್ನಿತರ ಸಮಾಜ ಮುಖಿ ಉತ್ತಮ ಸೇವೆಯನ್ನು ಮಾಡುತ್ತಿರುವ ಅಳಿಕೆ ಗ್ರಾಮ ಪಂಚಾಯತ್‌‌ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತುರವರ ಸಾರಥ್ಯದಲ್ಲಿ ನಡೆದ ಹೊನಲು ಬೆಳಕಿನ ಮ್ಯಾಟ್‌‌ ಕಬಡ್ಡಿ ಪಂದ್ಯಾಟದಲ್ಲಿ ಸಾವಿರಾರು ಕ್ರೀಡಾಭಿಮಾನಿಗಳು ಭಾಗವಹಿಸಿದರು.

- Advertisement -

Related news

error: Content is protected !!