ಮಂಗಳೂರು;ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕೋದು ಕಂಡುಬಂದಿದೆ. ಆದರೆ, ಪಾಕಿಸ್ತಾನ ಪರವಾಗಿ ಘೋಷಣೆ ಹಾಕಿದವರ ಬಂಧನ ಆಗಿಲ್ಲ ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಬಂದಾಗ ಬೆಳಗಾವಿ,ಉತ್ತರಕನ್ನಡದಲ್ಲಿ ಪಾಕಿಸ್ತಾನ ಧ್ವಜ ಹಿಡಿದು ಮೆರವಣಿಗೆ ಮಾಡಿದ್ರು.ಭಾರತದ ವಿರೋಧಿ ಘೋಷಣೆ ಹಾಕಿದವರನ್ನೇ ಈ ಸರ್ಕಾರದಿಂದ ಬಂಧನ ಮಾಡಲು ಆಗಿಲ್ಲ. ತುಷ್ಟಿಕರಣದ ರಾಜಕಾರಣಕ್ಕಾಗಿ ರಾಷ್ಟ್ರವಿರೋಧಿ ಕೃತ್ಯ ಮಾಡುವರರನ್ನು ಬೆಂಬಲಿಸಲಾಗುತ್ತಿದೆ. ಕಾಂಗ್ರೆಸ್ ಭಯೋತ್ಪಾದಕರ ಪರವಾಗಿ ಇರುವ ಪಾರ್ಟಿ ಎಂಬುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಕಾಂಗ್ರೆಸ್ ಮಣೆ ಹಾಕುತ್ತೆ.ಕಾಂಗ್ರೆಸ್ ರಾಷ್ಟ್ರವಿರೋಧಿ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.ರಾಜ್ಯ ಸಭಾ ಸದಸ್ಯ ಈ ಘಟನೆ ನಡೆದಾಗ ಖಂಡಿಸಬೇಕಿತ್ತು. ಆದ್ರೆ ಅವರೇ ಮೌನವಾಗಿದ್ದಾರೆ. ಅವರು ಪಾಕಿಸ್ತಾನಸ ಪರ ಇದ್ದಾರೆ ಎಂಬುದು ಸ್ಪಷ್ಟವಾಗಿದೆ.ಪಾಕಿಸ್ತಾನದ ಪರ ಘೋಷಣೆ ಹಾಕಿದವರನ್ನು ತಕ್ಷಣ ಬಂಧಿಸಬೇಕು ಜೈಲಿಗಟ್ಟಬೇಕು ಎಂದು ಗುಡುಗಿದ್ದಾರೆ.ನಾಸೀರ್ ಹುಸೇನ್ ಅವರ ನಿಲುವೇನೆಂದು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಉಚ್ಚಾಟಿಸಬೇಕು.ರಾಷ್ಟ್ರ ಭಕ್ತರ ಮೇಲೆ ಸರ್ಕಾರ ಕೇಸು ಹಾಕುತ್ತಿದೆ. ಇವರ ಕಾರ್ಯವನ್ನು ಖಂಡಿಸುವವರ ಮೇಲೆ ಕೇಸು ಹಾಕಲಾಗುತ್ತಿದೆ. ಈ ರಾಜ್ಯದಲ್ಲಿ ರಾಷ್ಟ್ರ ವಿರೋಧಿಗಳು ಮೆರೆಯುತ್ತಿದ್ದಾರೆ. ಅವರ ಮೇಲೆ ಕೇಸು ಹಾಕುವ ಬಂಧಿಸುವ ತಾಕತ್ತು ಈ ಸರ್ಕಾರಕ್ಕಿಲ್ಲ. ನಿನ್ನೆಯ ಘಟನೆಯನ್ನು ವಿರೋಧಿಸಿದವರ ಮೇಲೆ ಕೇಸು ಹಾಕುವ ಕೆಲಸ ಆಗ್ತಿದೆ ಎಂದು ಆರೋಪಿಸಿದ್ದಾರೆ.
ಕನಿಷ್ಟ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಆದ್ರೂ ಇದನ್ನು ಖಂಡಿಸ ಬೇಕಿತ್ತಾದರೂ ಅವರೂ ಮೌನವಾಗಿದ್ದಾರೆ. ಅವರೂ ಪಾಕಿಸ್ತಾನ ಪರ ಇದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ತಕ್ಷಣ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. ಪಾಕ್ ಪರ ಘೋಷಣೆಯ ವಿಚಾರ ಬಿಜೆಪಿ ಜೆಡಿಎಸ್ ಮಾಡಿಲ್ಲ. ಮಾಧ್ಯಮಗಳು ವರದಿ ಮಾಡಿದ್ದನ್ನೂ ನಾವು ಗಮನಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಧ್ಯಮದ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ