- Advertisement -
- Advertisement -





ಕತಾರ್ : ಕರ್ನಾಟಕದ ತುಳುನಾಡಿನ ಅಪರ್ಣಾ ಶರತ್ ಅವರು ಕೇಂದ್ರ ಸರ್ಕಾರದ “ನಾರಿ ಶಕ್ತಿ ಸಮ್ಮಾನ್” ಪ್ರಶಸ್ತಿಯನ್ನು ಕತಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಗೌರವಿಸಲ್ಪಟ್ಟ ಮೊದಲ ಮಹಿಳೆಯಾಗಿದ್ದಾರೆ.
ರಾಯಭಾರ ಕಚೇರಿ ಆಯೋಜಿಸಿದ್ದ ಪ್ರವಾಸಿ ಭಾರತೀಯ ದಿನಾಚರಣೆ ಸಂದರ್ಭದಲ್ಲಿ ಸಮುದಾಯ ಸೇವೆ ಹಾಗೂ ನಾಯಕತ್ವದಲ್ಲಿ ನೀಡಿದ ವಿಶಿಷ್ಟ ಕೊಡುಗೆಗಾಗಿ ಆಯ್ಕೆಯಾದ 12 ಭಾರತೀಯ ಮಹಿಳೆಯರಲ್ಲಿ ಒಬ್ಬರಾಗಿ ಅವರನ್ನು ಸನ್ಮಾನಿಸಲಾಯಿತು.
ಈ ಗೌರವವು ಭಾರತೀಯ ವಲಸಿಗ ಸಮುದಾಯದ ಸಬಲೀಕರಣ ಹಾಗೂ ಭಾರತ-ಕತಾರ್ ಸಂಬಂಧಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತುಳುನಾಡು ಹಾಗೂ ವಿದೇಶದಲ್ಲಿರುವ ಭಾರತೀಯ ಸಮುದಾಯಕ್ಕೆ ಇದು ಅಪಾರ ಹೆಮ್ಮೆಯ ವಿಷಯವಾಗಿದೆ.
- Advertisement -








