Saturday, April 20, 2024
spot_imgspot_img
spot_imgspot_img

ಇಡ್ಕಿದು ಗ್ರಾಮಕ್ಕೆ ರೈ ಚಾರಿಟೇಬಲ್ ಟ್ರಸ್ಟ್ ನ ಅಶೋಕ್ ರೈ ಭೇಟಿ-ಆರ್ ಎಸ್ ಎಸ್ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ‘ರೈ’

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶ್ರೀನಿವಾಸ ಗೌಡ ಉರಿಮಜಲು ಎಂಬವರು ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು,ಇಂದು ರೈ ಚಾರಿಟೇಬಲ್ ಟ್ರಸ್ಟ್ ನ ಅಶೋಕ್ ರೈ ಕೋಡಿಂಬಾಡಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿ ಧನ ಸಹಾಯವನ್ನು ನೀ್ಡಿದರು.

ಅವರ ಕುಟುಂಬಕ್ಕೆ ಧೈರ್ಯ ತುಂಬಿ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.ನಂತರ ಇಡ್ಕಿದು ಗ್ರಾಮದ ನೇರ್ಲಾಜೆಗೆ ಭೇಟಿ ನೀಡಿದ ರೈ ಯವರು ಸುಮಾರು ನಾಲ್ಕು ವರ್ಷಗಳಿಂದ ಅರ್ಧದಲ್ಲಿ ನಿರ್ಮಾಣಗೊಂಡಿದ್ದ ಚಂದ್ರಯ್ಯ ಆಚಾರಿ ನೆರ್ಲಾಜೆ ಇವರ ಮನೆಗೆ ಭೇಟಿ ನೀಡಿದರು. ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೋಲ್ಪೆ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಮಾಜಿ ಅಧ್ಯಕ್ಷರಾದ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮ ಕೋಲ್ಪೆ, ಪದ್ಮನಾಭ ಸಪಲ್ಯ, ತಿಲಕ್ ರಾಜ್ ಶೆಟ್ಟಿ, ಸ್ಥಳೀಯರಾದ ಯೋಗೀಶ್ ಗೌಡ ಮುಂಡ್ರಬೈಲು, ಎಪಿಎಂಸಿ ಸದಸ್ಯರಾದ ಜಗದೀಶ್ ದೇವಸ್ಯ,ಹರೀಶ್ ಉರಿಮಜಲು,ನಾರಾಯಣ ಸಪಲ್ಯ, ಉತ್ತಮ್ ದಾಸ್ ಉಪಸ್ಥಿತರಿದ್ದರು.

- Advertisement -

Related news

error: Content is protected !!