- Advertisement -
- Advertisement -
ಕಡಬ: ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ, ದನದ ಮಾಂಸ, ಕೃತ್ಯಕ್ಕೆ ಬಳಸುತ್ತಿದ್ದ ವಾಹನ ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಂಡ ಘಟನೆ ಕಲಾಯಿಯಲ್ಲಿ ನಡೆದಿದೆ.
ಸ್ಥಳೀಯರಾದ ಯಹ್ಯಾ ಯಾನೆ ಝಕಾರಿಯ (40), ಶಿಯಾಬ್ (23) ಹಾಗೂ ಮುನಾವರ್ ಹುಸೈನ್ (19) ಇನ್ನೋರ್ವ ಆರೋಪಿ ಸುಲೈಮಾನ್ ಪರಾರಿಯಾಗಿದ್ದಾನೆ. 70 ಕೆ.ಜಿ. ದನದ ಮಾಂಸ, ವಾಹನ, ಎಲೆಕ್ಟಿಕ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ.
ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್, ಕಡಬ ಎಸ್ಐ ಅಕ್ಷಯ್ ಡವಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
- Advertisement -