- Advertisement -
- Advertisement -


ನುಳಿಯಾಲು : ಶ್ರಾವಣ (ಸೋಣ) ಸಂಕ್ರಮಣ ಪ್ರಯುಕ್ತ ಸೇವಾರೂಪವಾಗಿ ನಡೆಸುವ ಸಾಮೂಹಿಕ ಪ್ರಾರ್ಥನೆಯ ಅಂಗವಾಗಿ ನುಳಿಯಾಲು ಧರ್ಮ ಚಾವಡಿಯಲ್ಲಿ ದಿನಾಂಕ 16-08-2024 ಶುಕ್ರವಾರ ಮಧ್ಯಾಹ್ನ ಗಂಟೆ 1.00 ರಿಂದ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಶಸ್ತ್ರ ತ್ಯಾಗ – ಧುರ ವೀಳ್ಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಭಾಗವತರಾಗಿ ಪ್ರಶಾಂತ ರೈ ಮುಂಡಾಲ ಗುತ್ತು, ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ, ಹಿಮ್ಮೇಳದಲ್ಲಿ ಚಂದ್ರಶೇಖರ ಗುರುವಾಯನಕೆರೆ, ಪವನ್ ರಾಜ್ ಕಲ್ಲೂರಾಯ ಹಾಗೂ ಅರ್ಥಧಾರಿಗಳಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ, ಅಶೋಕ್ ಶೆಟ್ಟಿ ಸರಪಾಡಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ರಾಧಾಕೃಷ್ಣ ರೈ ನುಳಿಯಾಲು, ಕು|ಅನನ್ಯಾ ರೈ ಮತ್ತು ಕು|ಸಮನ್ವಿ ರೈ ಭಾಗವಹಿಸಲಿದ್ದಾರೆ.

- Advertisement -