Saturday, June 28, 2025
spot_imgspot_img
spot_imgspot_img

ಸೆ.6 ರಂದು ವಿಟ್ಲ ಪೇಟೆಯ ಹೃದಯಭಾಗದಲ್ಲಿ ಅಯೋಧ್ಯಾ ಮೆನ್ಸ್ ಗ್ಯಾಲರಿಯ ನೂತನ ಮಳಿಗೆ ಶುಭಾರಂಭ

- Advertisement -
- Advertisement -

ವಿಟ್ಲದಲ್ಲಿ ಅಯೋಧ್ಯಾ ಮೆನ್ಸ್ ಗ್ಯಾಲರಿ ಬಟ್ಟೆ ಅಂಗಡಿ ತೆರೆದು ಎರಡು ವರ್ಷಗಳ ತರುವಾಯ ಇದೀಗ ನೂತನವಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಬಟ್ಟೆ ಮಳಿಗೆಯನ್ನು ವಿಟ್ಲ ಪೇಟೆಯ ಹೃದಯಭಾಗದಲ್ಲಿ ತೆರೆಯಲು ತಯಾರಾಗಿದ್ದಾರೆ.

ವಿಟ್ಲ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನೂತನವಾಗಿ ಸೆಪ್ಟೆಂಬರ್ 6 ಸೋಮವಾರದಂದು ಬೆಳಿಗ್ಗೆ 10ಕ್ಕೆ ಶುಭಾರಂಭಗೊಳ್ಳಲಿದೆ.

ಈ ಕಾರ್ಯಕ್ರಮವನ್ನು ಧಾರ್ಮಿಕ ಮುಖಂಡರಾದ ಕುಂಟಾರು ರವೀಶ್ ತಂತ್ರಿ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಪುತ್ತೂರು ವಿಧಾನಸಭಾ ಶಾಸಕರು ಸಂಜೀವ ಮಠಂದೂರು, ಬಂಟ್ವಾಳ ಶಾಸಕರು ರಾಜೇಶ್ ನಾಯ್ಕ್ ಉಳಿಪ್ಪಾಡಿ, ಉದ್ಯಮಿ ಹರೀಶ್ ನಾಯಕ್ ವಿಟ್ಲ, ಮೈತ್ರೆಯಿ ಗುರುಕುಲಮ್ ನ ಜಗನ್ನಾಥ್ ಕಾಸರಗೋಡು, ಹಿಂದೂ ಮುಖಂಡರು ಅರುಣ್ ಕುಮಾರ್ ಪುತ್ತಿಲ, ಕೃಷ್ಣಯ್ಯ ವಿಟ್ಲ ಅರಮನೆ, ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರು ಅರುಣ್ ವಿಟ್ಲ, ದೈವ ಪಾತ್ರಿ,ಪತ್ರಕರ್ತರು ಹಾಗೂ ಫ್ಯಾಷನ್ ಕೊರಿಯೋಗ್ರಾಫರ್ ಸನಿದ್ ಪೂಜಾರಿ, ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರು ಹರಿಪ್ರಸಾದ್ ಯಾದವ್, ವಿಟಿವಿ ಸಂಪಾದಕರು ರಾಮದಾಸ್ ಶೆಟ್ಟಿ ವಿಟ್ಲ, ಬಂಟ್ವಾಳ ತಾಲೂಕು ಯುವಮೋರ್ಚದ ಉಪಾಧ್ಯಕ್ಷರು ವಿನೋದ್ ಕರೋಪಾಡಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು ಶ್ರೀಕೃಷ್ಣ, ಉದ್ಯಮಿ ರಾಮಯ್ಯ ಶೆಟ್ಟಿ ವಿಟ್ಲ ಇವರುಗಳು ಭಾಗವಹಿಸಲಿದ್ದಾರೆ.

ತಾವೆಲ್ಲರೂ ಈ ಶುಭ ಸಮಾರಂಭಕ್ಕೆ ಆಗಮಿಸಿ ಸಹಕರಿಸಿ, ಮುಂದೆಯೂ ಜನರ ಸಹಕಾರ ಪ್ರೋತ್ಸಾಹ ಹೀಗೆ ಇರಲಿ ಎಂದು ಅಯೋಧ್ಯಾ ಗ್ರೂಪ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!