Saturday, June 28, 2025
spot_imgspot_img
spot_imgspot_img

ಅಲ್ಪ ಸಂಖ್ಯಾತರಿಗೊಂದು ಹಿಂದೂಗಳಿಗೊಂದು ಕಾನೂನು ಮಾಡಿದರೆ ಆಗುವ ಸಂಘರ್ಷಕ್ಕೆ ಸರ್ಕಾರವೇ ಹೊಣೆಯಾಗಲಿದೆ : ಬಜರಂಗದಳ ಮುಖಂಡ ಮುರಳೀಕೃಷ್ಣ ಹಂಸತಡ್ಕ

- Advertisement -
- Advertisement -

ಪುತ್ತೂರು: ಅಲ್ಪ ಸಂಖ್ಯಾತ ಸಮಾಜದವರು ಮಂಗಳೂರಿನ ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿದ ವಿಚಾರವಾಗಿ ಸಾರ್ವಜನಿಕ ಅಶಾಂತಿ ಸೃಷ್ಟಿಸುವವರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳದೇ, ಇದೇ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂಪ್ರೇರಿತ ಕೇಸು ದಾಖಲಿಸಿದ ಪೋಲಿಸ್ ಅಧಿಕಾರಿಯನ್ನು ಕಡ್ಡಾಯ ರಜೆಯಲ್ಲಿ ಕಾಂಗ್ರೇಸ್‌ ಸರಕಾರ ಕಳುಹಿಸಿರುವುದನ್ನು ಖಂಡಿಸಿ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ಅಮ‌ರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಬಜರಂಗದಳ ಮುಖಂಡ ಮುರಳಿಕೃಷ್ಣ ಹಂಸತಡ್ಕ ಅವರು ಮಾತನಾಡಿದರು.

ಹಿಂದುಗಳು ಮತ್ತು ಮುಸಲ್ಮಾರಿಗೆ ಪ್ರತ್ಯೇಕ ಕಾನೂನಿನ ಸಂದೇಶ ನೀಡುತ್ತಿದೆ. ಇದರ ವಿರುದ್ಧ ಜನರು ದಂಗೆ ಏಳುವ ಮೊದಲು ಸರಕಾರ ಎಚ್ಚೆತ್ತಕೊಳ್ಳಬೇಕು. ನಮಾಜು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸರಕಾರ ಅದನ್ನು ಪ್ರಶ್ನಿಸಿದವರ ವಿರುದ್ಧ ಕೇಸು ದಾಖಲಿಸುತ್ತಿದೆ. ಸಮಾಜದ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯನ್ನೇ ಸರಕಾರ ಕಟ್ಟಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಅವರು ಹುಬ್ಬಳ್ಳಿಯಲ್ಲಿ ನಡೆದ ಹಿಂದೂ ಸಹೋದರಿಯರ ಎರಡು ಕೊಲೆ ಪ್ರಕರಣ ಹಾಗೂ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ನಡೆದ ದಾಂಧಲೆ ಪ್ರಕರಣವನ್ನು ಮೆಲುಕು ಹಾಕಿದರು. ಸರಕಾರ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡದಿದ್ದರೆ ಮುಂದೆ ಅದಕ್ಕೆ ಬೆಲೆ ಕಟ್ಟ ಬೇಕಾದ ದಿನ ಬರಬಹುದು.


ನಮಾಜು ಮಾಡಿದ ವಿಚಾರವನ್ನು ಪ್ರಶ್ನಿಸಿದ ಶರಣ್ ಪಂಪ್‌ವೆಲ್ ಮೇಲೆ ಕೇಸು ದಾಖಲಿಸುವುದಾದರೆ ಅಂತಹ ಸಾವಿರ ಕಾರ್ಯಕರ್ತರ ಹೆಸರು ಕೊಡುತ್ತೇವೆ. ಕೇಸು ದಾಖಲಿಸಲಿ ಅಥವಾ ಗಡಿಪಾರು ಮಾಡಲಿ. ಅಲ್ಪ ಸಂಖ್ಯಾತರಿಗೊಂದು ಹಿಂದೂಗಳಿಗೊಂದು ಕಾನೂನು ಮಾಡಿದರೆ ಆಗುವ ಸಂಘರ್ಷಕ್ಕೆ ಸರ್ಕಾರವೇ ಹೊಣೆಯಾಗಲಿದೆ. ರಾಜ್ಯದ ಜನ ಅಧಿಕಾರ ನೀಡಿದ್ದು ಉತ್ತಮ ಆಡಳಿತಕ್ಕಾಗಿ. ಅಧಿಕಾರ ಇದೆ ಎಂದು ಮೆರೆದರೆ ನಿಮ್ಮ ಹಿಂದಿನ ದಿನಗಳನ್ನು ಯೋಚಿಸಬೇಕು. ಅಶಾಂತಿ ಸೃಷ್ಟಿಸುವವರನ್ನು ರಕ್ಷಣೆ ಮಾಡುವ ಮೂಲಕ ಹಿಂದೂ ವಿರೋಧಿ ಕೃತ್ಯ ಮಾಡುವರಿಗೆ ಸರಕಾರ ಬೆಂಬಲ ನೀಡುತ್ತದೆ. ಕಾನೂನು ಮರೆತರೆ ಅದಕ್ಕೆ ಹಿಂದೂ ಸಮಾಜ ಯಾವ ಉತ್ತರ ನೀಡಲು ಸಿದ್ದವಿದೆ. ನಮ್ಮ ಸಹಣೆ, ತಾಳೆಗೂ ಮಿತಿಯಿದೆ. ಅದಕ್ಕೆ ಅವಕಾಶ ಕೊಡಬಾರದು. ಸ್ವಯಂ ಪ್ರೇರಿತ ಕೇಸು ದಾಖಲು ಮಾಡಿರುವುದನ್ನು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಮೂಲಕ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಬಜರಂಗದಳ ಮುಖಂಡ ಮುರಳಿಕೃಷ್ಣ ಹಂಸತಡ್ಕ ಆಗ್ರಹಿಸಿದರು.

ಮುಸ್ಲಿಮರು ನಮಾಜ್ ಮಾಡಿದರೆ, ನಾವು ರಸ್ತೆಯಲ್ಲಿ ಭಜನೆ, ಪೂಜೆಗಳನ್ನು ಮಾಡಬೇಕಾದ ದಿನಗಳು ಬರಬಹುದು ಎಂದು ಹಸಂತಡ್ಕ ಎಚ್ಚರಿಸಿದರು.

ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಮೇಲು, ಉಪಾಧ್ಯಕ್ಷ ಸತೀಶ್, ಜಯಂತ ಕುಂಜೂರುಪಂಜ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement -

Related news

error: Content is protected !!