Thursday, May 9, 2024
spot_imgspot_img
spot_imgspot_img

ಬಳ್ಳಾರಿ: ಅಡಿಕೆ ತುಂಬಿದ್ದ ಲಾರಿ ಹಾಗೂ ಬೈಕ್ ಅಪಘಾತ – ಓರ್ವ ಸ್ಥಳದಲ್ಲೇ ಸಾವು, ಮರ್ತ್ತೋವ ಗಂಭೀರ!

- Advertisement -G L Acharya panikkar
- Advertisement -

ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿ ಗ್ರಾಮದ ಹತ್ತಿರ ರಾಹೆ 50ರಲ್ಲಿ ಅಡಿಕೆ ತುಂಬಿದ್ದ ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಯಲ್ಲಿ ಲಾರಿ ಹಾಗೂ ಬೈಕ್ ಗೆ ಬೆಂಕಿ ತಗುಲಿ ಭಸ್ಮವಾಗಿವೆ.

ಅಪಘಾತದಲ್ಲಿ ಲಾರಿಯ ಕೆಳಗೆ ಬೈಕ್ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕಿನ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಲಾರಿ ದುರ್ಗದಿಂದ ಹೊಸಪೇಟೆ ಕಡೆಗೆ ತೆರಳುತ್ತಿದ್ದು, ಹಾರಕ ಬಾವಿ ಗ್ರಾಮದ ಇಬ್ಬರು ಯುವಕರು ತಮ್ಮ ಗ್ರಾಮದೆಡೆಗೆ ತೆರಳುತಿದ್ದಾಗ ಡಿಕ್ಕಿ ಸಂಭವಿಸಿದೆ. ಬೈಕ್ ಲಾರಿ ಕೆಳಗೆ ಸಿಲುಕಿದ್ದು ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಅಡಿಕೆ ತುಂಬಿರುವ ಸರ್ದಾರ್ ಜೀ ಲಾರಿ ಉರಿದು ಸಂಪೂರ್ಣ ಭಸ್ಮವಾಗಿದೆ.

- Advertisement -

Related news

error: Content is protected !!