Thursday, April 25, 2024
spot_imgspot_img
spot_imgspot_img

ಸೈಬರ್ ವಂಚಕರ ತಂಡ ಸೆರೆ; ಸುಮಾರು ₹48 ಕೋಟಿ ತಡೆಹಿಡಿದ ಪೊಲೀಸರು!

- Advertisement -G L Acharya panikkar
- Advertisement -

ಬೆಂಗಳೂರು: ಜನರನ್ನು ವಂಚಿಸಿ ಕ್ಷಣ ಮಾತ್ರದಲ್ಲಿ ಹಣ ದೋಚುತ್ತಿದ್ದ ಸೈಬರ್ ವಂಚಕರ ತಂಡವೊಂದನ್ನು ತಡೆಹಿಡಿಯುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೈಬರ್ ವಂಚಕರ ಕೈ ಸೇರುತ್ತಿದ್ದ  ಸುಮಾರು ₹48 ಕೋಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತನ್ನ ಮಾಲೀಕನಿಂದಲೇ ಹಣ ದೋಚುವುದಕ್ಕಾಗಿ ನಕಲಿ ಪೊಲೀಸರ ತಂಡ ರಚಿಸಿ, ಮಾಲೀಕನ ಬೈಕ್‌, ಎಟಿಎಂನಲ್ಲಿದ್ದ ಹಣ ಕಳವು ಮಾಡಿಸಿರುವ ನಾಲ್ಕು ಮಂದಿ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಬಸವೇಶ್ವರ ನಗರದ ನಿವಾಸಿ ಶರತ್ ಶೆಟ್ಟಿ (25), ಮೂಡಲಪಾಳ್ಯದ ಪೂರ್ವಿಕ್ ರಾಜ್ (21), ಚೋಳರ ಪಾಳ್ಯದ ಮೋಹನ್ ಕುಮಾರ್ (24), ಜಾಲಹಳ್ಳಿಯಲ್ಲಿ ವಾಸವಿದ್ದ ತಪಸ್ ರಾಯ್ (24) ಎಂದು ಗುರುತಿಸಿದ್ದಾರೆ.

‘ಜಾಲಹಳ್ಳಿಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ ತಪನ್ ಬಿಸ್ವಾಸ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಬಂಧಿತ ತಪಸ್‌ ಇವರ ಬಳಿಯೇ ಕೆಲಸ ಮಾಡಿಕೊಂಡಿದ್ದು, ಈ ಕೃತ್ಯ ಎಸಗಿದ್ದಾನೆ. ಬಂಧಿತರಿಂದ ₹41 ಸಾವಿರ ನಗದು, ಒಂದು ಸ್ಕೂಟರ್ ಹಾಗೂ ಎರಡು ಬೈಕ್‌ ಜಪ್ತಿ ಮಾಡಲಾಗಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು. ‘ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ’ ತಂತ್ರಜ್ಞಾನ ಬಳಸಿ, ಕಳೆದ ಡಿಸೆಂಬರ್‌ನಿಂದ ಮೇ ವರೆಗೆ ದಾಖಲಾಗಿದ್ದ 3,175 ವಂಚನೆ ಪ್ರಕರಣಗಳ ಪೈಕಿ 1,312 ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದ್ದು, ಇದರಿಂದ ₹48.24 ಕೋಟಿ ಹಣವನ್ನು ಸೈಬರ್ ವಂಚಕರ ಕೈಸೇರದಂತೆ ತಡೆಯಲಾಗಿದೆ’ ಎಂದು ಪಂತ್‌ ಮಾಹಿತಿ ನೀಡಿದರು.

‘ಸೈಬರ್‌ ವಂಚನೆಗೆ ಒಳಗಾದವರು ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂ 112 ಅಥವಾ 100ಕ್ಕೆ ಕರೆ ಮಾಡಿದರೆ, ‘ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ’ ತಾಂತ್ರಿಕತೆಯ ಮೂಲಕ ‘ಗೋಲ್ಡನ್ ಅವರ್’ ಬಳಸಿಕೊಂಡು, ನಿಮ್ಮ ಖಾತೆಯಿಂದ ಹಣ ತಲುಪಿರುವ ಬೇರೆ ಖಾತೆಯನ್ನು ಬ್ಲಾಕ್‌ ಮಾಡಿಸಿ ಹಣವನ್ನು ಹಿಂಪಡೆಯಬಹುದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ. ‘ಈ ಪ್ರಕ್ರಿಯೆ ವಂಚನೆಗೆ ಒಳಗಾದ ಕೆಲವೇ ಸಮಯದೊಳಗೆ ಮಾತ್ರ ನಡೆಯಲಿದ್ದು, ಆ ಸಮಯವನ್ನು ‘ಗೋಲ್ಡನ್ ಅವರ್’ ಎನ್ನಲಾಗುವುದು. ವಂಚನೆಗೆ ಒಳಗಾದವರು ತಕ್ಷಣವೇ ಮಾಹಿತಿ ನೀಡಿದರೆ, ವಂಚಕರ ಕೈಸೇರುವ ಮುನ್ನ ಹಣ ವಾಪಸ್ ಪಡೆಯಲು ಅವಕಾಶ ಇರುತ್ತದೆ’.

- Advertisement -

Related news

error: Content is protected !!